ಮುಂಬಯಿ, ಅ. 20: ಅಖಿಲ ಭಾರತ ತುಳು ಒಕ್ಕೂಟ ಮತ್ತು ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ಪದ್ಮಭೂಷಣ ಡಾ| ಡಿ. ವಿರೇಂದ್ರ ಹೆಗ್ಗಡೆರವರ ಗೌರವ ಅಧ್ಯಕ್ಷತೆಯಲ್ಲಿ ಅಡ್ಯಾರ್ ಅಲ್ಲಿನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಬರುವ ಡಿ.12, 13, 14ರಂದು ತುಳು ಭಾಷೆ, ಸಂಸ್ಕೃತಿ, ಜನಜೀವನ, ಗ್ರಾಮೀಣ ಅಭಿವೃದ್ಧಿಗಾಗಿ ವಿಶ್ವ ತುಳುವೆರೆ ಪರ್ಬ ನಡೆಯಲಿದೆ.
ಈ ಸಂದರ್ಭದಲ್ಲಿ ಚಾರಿತ್ರಿಕ ತುಳುವ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜ ವಿಜಯ ಬ್ಯಾಂಕ್ನ ಶಿಲ್ಪಿ ಮುಲ್ಕಿ ಸುಂದರಾಮ ಶೆಟ್ಟಿ ಸ್ಮರಣಾರ್ಥವಾಗಿ ವಿಜಯ ಬ್ಯಾಂಕ್ ಆಫೀಸರ್ಸ್ ಯೂನಿಯನ್ ಮತ್ತು ವಿಜಯ ಬ್ಯಾಂಕ್ ವರ್ಕರ್ಸ್ ಆರ್ಗನೈಸೇಷನ್ ಮಂಗಳೂರು ವಲಯ ಇವರ ಪ್ರಾಯೋಜಕತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪುರುಷ ಮತ್ತು ಮಹಿಳೆಯರ ತುಳುವೆರೆ ಕಬಡ್ಡಿ ಪಂದ್ಯಾಟವು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ (ರಿ.) ಮಂಗಳೂರು ಇವರ ವ್ಯವಸ್ಥಾಪಕತೆಯಿಂದ ಡಿಸೆಂಬರ್ 13ರಂದು ಸಂಜೆ 3:00 ಗಂಟೆ ಯಿಂದ ಆಹ್ವಾನಿತ 16 ತಂಡಗಳ ಪಂದ್ಯಾಟ ನಡೆಯಲಿದೆ.
ಪಂದ್ಯಾಟದ ವಿಶೇಷ ಆಕರ್ಷಣೆಯಾಗಿ ವಿಜಯ ಬ್ಯಾಂಕ್ ಕಬಡ್ಡಿ ತಂಡ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ತುಳುವೆರೆ ತಂಡಗಳು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆಯ ಕಾರ್ಯದಶರ್ಿಯಾದ ಪುರುಷೋತ್ತಮ ಪೂಜಾರಿ ಮೊಬೈಲ್: 8453812679 ಮತ್ತು ಕಾಯಾ೯ಧ್ಯಕ್ಷ ರತನ್ ಶೆಟ್ಟಿ ಮೊಬೈಲ್: 9448529625 ಇವರನ್ನು ಸಂಪಕಿ೯ಸ ಬಹುದು ಎಂದು ವಿಶ್ವ ತುಳುವೆರೆ ಪರ್ಬದ ಸಮಿತಿಯ ಕೋಶಾಧಿಕಾರಿ ಮುಲ್ಕಿ ಕರುಣಾಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜೇತ ತಂಡ ಮತ್ತು ಪ್ರದರ್ಶನ ಪಂದ್ಯಗಳಿಗೆ ನಗದು ಮತ್ತು ವೈಯಕ್ತಿಕ ಬಹುಮಾನವಾಗಿ ಪ್ರಥಮ: ರೂ. 25000/- ದ್ವಿತೀಯ: ರೂ. 15000/- ತೃತೀಯ: ರೂ. 10000/- ನಾಲ್ಕನೇ: ರೂ. 10000/- ಪ್ರದರ್ಶನ ಪಂದ್ಯಕ್ಕೆ ರೂ. 15000/- ಹಾಗೂ ರೂ. 10000/- ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.