ಮಂಗಳೂರು: ದೇಶದಾದ್ಯಂತ ನೋಟುಗಳ ಅಪಮೌಲ್ಯಕರಣದಿಂದ ಸಾಮಾನ್ಯ ಜನರ ಮೇಲಾಗಿರುವ ದುಷ್ಪರಿಣಾಮ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರಾದ್ಯಂತ ಹೋರಾಟ ನಡೆಸಲು ಸಿದ್ಧತೆ ನಡೆಸಿದೆ ಎಂದು ವಿಧಾನ ಪರಿಷತ್ ನ ಮುಖ್ಯ ಸಚೇತಕ ಹೇಳಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಹೇಳಿದ ೫೦ ದಿನಗಳು ಮುಕ್ತಾಯವಾಗಿದೆ.ಇನ್ನೂ ಜನರು ಬ್ಯಾಂಕ್ ನಲ್ಲಿ ಹಣಕ್ಕಾಗಿ ಪರದಾಡುತ್ತಿದ್ದಾರೆ.ಇದು ಕೇಂದ್ರ ಸರ್ಕಾರ ಮಾಡಿರುವಂತ ದೊಡ್ಡ ತಪ್ಪು ಎಂದು ಹೇಳಿದರು