ಮಂಗಳೂರು: ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಹಾರಾಡಿಯಲ್ಲಿ ನಡೆದ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪುತ್ತೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಕೂಲಿ ಕಾರ್ಮಿಕ ಬಂಟ್ವಾಳದ ಲಕ್ಷ್ಮಣ್ ನಾಯಕ್ ಎಂದು ಗುರುತಿಸಲಾಗಿದೆ.೩೮ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ ಪುತ್ತೂರು ಪೊಲೀಸರು ಆರೋಪಿಯಿಂದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.೨ ವರ್ಷಗಳಿಂದ ಮಹಿಳೆಗೆ ಆಪ್ತನಾಗಿದ್ದ ಆರೋಪಿ ಸಂಚು ರೂಪಿಸಿ ಹಣಕ್ಕಾಗಿ ಕೊಲೆಗೈದಿದ್ದಾನೆ.ಇನ್ನು ವಿನೋದಿನಿ ಕಾಮತ್ ಗುರುವಾರದಂದು ಕೈಕಾಲು ಕಟ್ಟಿ ಹಾಕಿದ್ದ ಸ್ಥಿತಿಯಲ್ಲಿ ಕೊಲೆಯಾಗಿದ್ದರು.