ಕುಂದಾಪುರ:ಈಗ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯವಾಗಿ ಪಾನ್ ಕಾರ್ಡ್ ಬೇಕಾಗಿದೆ.ಹಣಕಾಸು ವ್ಯವಹಾರ ನಡೆಸುವ ಸಂದರ್ಭದಲ್ಲಿ ಪಾನ್ ಕಾರ್ಡ್ ಅತ್ಯಗತ್ಯ.ಆದಾಯ ತೆರಿಗೆ ಇಲಾಖೆ ಕೊಡಮಾಡುವ 10 ಅಂಕೆಯ ಕಾರ್ಡ್ ಇದಾಗಿದೆ ಎಂದು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಶಂಕರ್ ನಾಯ್ಕ ಹೇಳಿದರು.
ಅವರು ಭಾನುವಾರ ಬೀಜಾಡಿ ಮಿತ್ರಸೌಧದಲ್ಲಿ ವಿಂಶತಿ ಉತ್ಸವದ ಸಂಭ್ರಮದಲ್ಲಿರುವ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ತೆಕ್ಕಟ್ಟೆ ಸÁ್ಕ್ವ್ಯರ್ ಅಕೌಂಟೆಂಗ್ ಸಹಯೋಗದಲ್ಲಿ ನಡೆದ ಬೃಹತ್ ಪಾನ್ ಕಾರ್ಡ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಓರ್ವ ವ್ಯಕ್ತಿ ಒಂದು ಪಾನ್ ಕಾರ್ಡ್ ಹೊಂದಬಹುದಾಗಿದ್ದು,ಒಂದಕ್ಕಿಂತ್ ಹೆಚ್ಚು ಪಾನ್ ಕಾರ್ಡ್ ಹೊಂದಿದರೆ,ಅದನ್ನು ಆದಷ್ಟೂ ಬೇಗನೇ ಹಿಂದಿರುಗಿಸಬೇಕು.ಇಲ್ಲದೇ ಹೋದರೆ ಭಾರಿ ದಂಡ ತೆರಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ವಹಿಸಿದ್ದರು.
ವೇದಿಕೆಯಲ್ಲಿ ತೆಕ್ಕಟ್ಟೆ ಸÁ್ಕ್ವ್ಯರ್ ಅಕೌಂಟೆಂಗ್ ಸಂಸ್ಥೆಯ ಯೋಗೇಂದ್ರ,ಆನಗಳ್ಳಿ ಪ್ರಗತಿ ಯುವಕ ಮಂಡಲದ ಕಾರ್ಯದರ್ಶಿ ಸಂತೋಷ್ ಆನಗಳ್ಳಿ, ಮಿತ್ರ ಸಂಗಮದ ಪ್ರಧಾನ ಕಾರ್ಯದರ್ಶಿ ಪ್ರದೀಪ ದೇವಾಡಿಗ ಉಪಸ್ಥಿತರಿದ್ದರು.ಚಂದ್ರ ಬಿ.ಎನ್.,ನಾಗೇಂದ್ರ ಆಚಾರ್ಯ,ಗಿರೀಶ್ ಆಚಾರ್ಯ ಮೊದಲಾದವರು ಸಹಕರಿಸಿದರು.ಸಂಸ್ಥೆಯ ಅಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ಸ್ವಾಗತಿಸಿದರು.ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ರಾಜೇಶ್ ಆಚಾರ್ಯ ವಂದಿಸಿದರು.