ಸಾಲಿಗ್ರಾಮ ಯಕ್ಷಗಾನ ಟೆಂಟಿನ ಮೇಳವು 50ವರ್ಷವನ್ನು ಪೂರೈಸಿದ ಸವಿನೆನಪಿಗಾಗಿ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆಯವರನ್ನು ಕಲ್ಕೂರ ಪ್ರತಿಷ್ಠಾನದಿಂದ ಇತ್ತೀಚೆಗೆ ಸನ್ಮಾನಿಸಲಾಯ್ತು.
ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರರಾದ ಶರವು ರಾಘವೇಂದ್ರ ಶಾಸ್ತ್ರಿಯವರು ‘ಕಲ್ಕೂರ ಯಕ್ಷಗಾನ ಯಜಮಾನಾಗ್ರೇಸರ ಸಿರಿ ಪ್ರಶಸ್ತಿಯೊಂದಿಗೆ ಅಭಿನಂದಿಸಿದರು.
ಸಾಲಿಗ್ರಾಮ ಸೌಕೂರು, ಹಾಲಾಡಿ, ಮಡಾಮಕ್ಕಿ, ಮಂಗಳಾದೇವಿ ಸಹಿತ 6 ಮೇಳಗಳ ಯಜಮಾನರಾಗಿರುವ ಪಳ್ಳಿ ಕಿಶನ್ ಹೆಗ್ಡೆಯವರ ಸಾಧನೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಕೊಂಡಾಡಿದರು.