ಡಾ| ಭರತ್ಕುಮಾರ್ ಪೊಲಿಪು ರಚಿತ `ಸಾಹಿತಿ, ಚಿಂತಕ ವಿಶ್ವನಾಥ್ ಕಾರ್ನಾಡ್' ಕೃತಿ ಬಿಡುಗಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.30: ಮುಂಬಯಿ ವಿವಿ ಕನ್ನಡ ವಿಭಾಗ- ಮೈಸೂರು ಅಸೋಸಿಯೇಶನ್ ಮುಂಬಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಟುಂಗದಲ್ಲಿನ ಮೈಸೂರು ಅಸೋಸಿಯೇಶನ್ನ ಕಿರು ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಪ್ರಶಸ್ತಿ ಪುರಸ್ಕೃತ ನಾಟಕಕರ್ಮಿ, ರಂಗತಜ್ಞ ಡಾ| ಭರತ್ಕುಮಾರ್ ಪೆÇಲಿಪು ರಚಿತ `ಸಾಹಿತಿ, ಚಿಂತಕ ವಿಶ್ವನಾಥ್ ಕಾರ್ನಾಡ್' ಕೃತಿ ಅನಾವರಣ ಗೊಳಿಸಲ್ಪಟ್ಟಿತು.
ಕನ್ನಡ ವಿಭಾಗ ಮುಂಬಯಿ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಡಾ| ವಿಶ್ವನಾಥ್ ಕಾರ್ನಾಡ್ ಸಮ್ಮುಖದಲ್ಲಿ ಮೈಸೂರು ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿ ಸದಸ್ಯ, ಟ್ರಸ್ಟಿ ಕೆ.ಮಂಜುನಾಥಯ್ಯ ಕೃತಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಜಸ್ಟೀಸ್ ಬಿ.ಎನ್ ಶ್ರೀಕೃಷ್ಣ, ವಿಮರ್ಶಕಿ ಡಾ| ಮಮತಾ ರಾವ್, ಕನ್ನಡ ವಿಭಾಗ ಮುಂಬಯಿ ವಿವಿ ಇದರ ಸಂಶೋಧನ ಸಹಾಯಕ ವೈ.ವಿ.ಮಧುಸೂದನ ರಾವ್, ಡಾ| ಮಂಜುನಾಥಯ್ಯ, ಡಾ| ಜಿ.ವಿ.ಕುಲಕರ್ಣಿ, ನ್ಯಾ| ವಸಂತ್ ಕಲಕೋಟಿ, ಓಂದಾಸ್ ಕಣ್ಣಂಗಾರ್, ಎಸ್.ಕೆ ಸುಂದರ್, ಸುರೇಂದ್ರಕುಮಾರ್ ಮಾರ್ನಾಡ್, ಅವಿನಾಶ್ ಕಾಮತ್, ಮತ್ತಿತರ ಗಣ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು, ಡಾ| ವಿಶ್ವನಾಥ ಕಾರ್ನಾಡ್ ಅವರು ಡಾ| ಪೆÇಲಿಪು ಅವರಿಗೆ ಕೃತಿಗೌರವ ಪುಷ್ಪಗುಚ್ಛ ಸಲ್ಲಿಸಿ ಅಭಿವಂದಿಸಿದರು.
ಶೈಲಜಾ ಮದುಸೂಧನ್ ಪ್ರಾರ್ಥನೆಯನ್ನಾಡಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕ್ರಮವಾಗಿ ಕೃತಿ ಪರಿಚಯ ಗೈದರು. ಡಾ| ಜ್ಯೋತಿ ಸತೀಶ್ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.