ಮುಂಬಯಿ, ಅ.22: ಬೃಹನ್ಮುಂಬಯಿಯಲ್ಲಿ ಶೈಕ್ಷಣಿಕ-ಸಾಮಾಜಿಕ, ಸಾಂಸ್ಕೃತಿಕ ಸೇವೆಗಳ ಮುಖೇನ ಸುಮಾರು ಆರು ದಶಕಗಳಿಂದ ಸೇವಾ ನಿರತ ಚೆಂಬೂರು ಕನಾ೯ಟಕ ಸಂಘ (ರಿ.) ಇದರ ಅಧ್ಯಕ್ಷರಾಗಿ ಜಯ ಎನ್.ಶೆಟ್ಟಿ ಪುನಾರಾಯ್ಕೆ ಗೊಂಡರು.
Jaya N.Shetty
Adv. H. K. Sudhakar
Gunakar Hegde
Yogesh V.Guaran
Ranjankumar Amin
Sudhakar Anchan
2014-2017ರ ಸಾಲಿನ ಅವಧಿಗೆ ಕಾರ್ಯಕಾರಿ ಸಮಿತಿಗೆ ಆರು ಸದಸ್ಯರನ್ನು ಆಯ್ಕೆಗೊಳಿಸಲಾಗಿದ್ದು, ಉಪಾಧ್ಯಕ್ಷರಾಗಿ ನ್ಯಾ| ಹೆಚ್.ಕೆ ಸುಧಾಕರ, ಗೌರವ ಪ್ರಧಾನ ಕಾರ್ಯದಶಿ೯ ಗುಣಾಕರ ಹೆಚ್.ಹೆಗ್ಡೆ, ಜೊತೆ ಕಾರ್ಯದಶಿ೯ ರಂಜನ್ ಕುಮಾರ್ ಆರ್. ಅಮೀನ್, ಜೊತೆ ಕೋಶಾಧಿಕಾರಿ ಯೋಗೇಶ್ ವಿ.ಗುಜರನ್, ಜೊತೆ ಕಾರ್ಯದ ಶಿ೯ ಸುಧಾಕರ ಎಚ್.ಅಂಚನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಪ್ರಭಾಕರ ಬಿ.ಬೋಳಾರ್, ವಿಶ್ವನಾಥ ಎಸ್.ಶೇಣವ, ದೇವದಾಸ ಕೆ.ಶೆಟ್ಟಿಗಾರ್, ಟಿ.ಆರ್.ಶೆಟ್ಟಿ, ಮಧುಕರ್ ಜಿ.ಬೈಲೂರು, ರಾಮ ಪೂಜಾರಿ, ಮೋಹನ್ ಎಸ್.ಕಾಂಚನ್, ಅಶೋಕ್ ಸಾಲ್ಯಾನ್, ಜಯ ಎಂ.ಶೆಟ್ಟಿ, ದಯಾ ಸಾಗರ್ ಚೌಟ, ಚಂದ್ರಶೇಖರ್ ಅಂಚನ್, ಹಾಗೂ ಸುಂದರ್ ಕೋಟ್ಯಾನ್ ಒಳಗೊಂಡು 12 ಮಂದಿ ಸದಸ್ಯರನ್ನು ಹೊಂದಿದ್ದು ಮಾತ್ರವಲ್ಲದೆ ರಾಜು ಬಿ. ಸನಿಲ್, ಎಸ್. ನಾಯಕ್ ಮತ್ತು ಸಂಜೀವ ಶೆಟ್ಟಿ ಅವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಕೋ.ಅಪ್ಟ್ ಮಾಡಲಾಯಿತು.
ಮುಂಬಯಿ ನಗರದ ಪ್ರಥಮ ಉಪನಗರವಾದ ಚೆಂಬೂರ್ನಲ್ಲಿ 6 ದಶಕಗಳ ಹಿಂದೆ ಸ್ಥಾಪನೆಯಾದ ಚೆಂಬೂರು ಕನಾ೯ಟಕ ಸಂಘದ ಆಶ್ರಯದ ಚೆಂಬೂರು ಕನಾ೯ಟಕ ವಿದ್ಯಾಲಯದ ಸಮುಚ್ಛಯದಲ್ಲಿ ಪ್ಲೇ ಸ್ಕೂಲಿನಿಂದ ತೊಡಗಿ ಜ್ಯೂನಿಯರ್ ಕಾಲೇಜು ಹಂತದ ವರೆಗೆ ಅಂಗ್ಲ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಚೆಂಬೂರು ವಲಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯ ಕನ್ನಡ ಮಾಧ್ಯಮವು ತನ್ನ ಅತ್ಯುತ್ತಮ ಫಲಿತಾಂಶ ಹಾಗೂ ವಿದ್ಯಾಥಿ೯ಗಳ ಪಠ್ಯೇತರ ಚಟುವಟಿಕೆಗಳಿಗೂ ಪ್ರಸಿದ್ಧಿ ಪಡೆದಿದೆ.