ಮುಂಬಯಿ ಸಮಿತಿ ಅಧ್ಯಕ್ಷರಾಗಿ ಡಾ| ಶಿವರಾಮ ಕೆ.ಭಂಡಾರಿ ಆಯ್ಕೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಫೆ.09: ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕುಲಕಸುಬು ಕ್ಷೌರಿಕ ವೃತ್ತಿ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಜಾಗತಿಕ ಮನ್ನಣೆ ಪಡೆದ ಕಾರ್ಕಳ ಅತ್ತೂರು ಮೂಲದ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಅವರು ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವ-2017ರ ಮುಂಬಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಹಾಗೂ ಭಂಡಾರಿ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ನೇತೃತ್ವದಲ್ಲಿ ನಡೆಸಲಾದ ಸಭೆಯಲ್ಲಿ ಆಯ್ಕೆ ಮುಂಬಯಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲ್ಪಟ್ಟಿತು.
ಇತರ ಪದಾಧಿಕಾರಿಗಳಾಗಿ ಕೇಶವ ಟಿ.ಭಂಡಾರಿ (ಉಪಾಧ್ಯಕ್ಷರು) ನ್ಯಾ| ಆರ್.ಎಂ.ಭಂಡಾರಿ (ಗೌ| ಪ್ರ| ಕಾರ್ಯದರ್ಶಿ), ರಮೇಶ್ ವಿ.ಭಂಡಾರಿ (ಗೌ| ಪ್ರ| ಕೋಶಾಧಿಕಾರಿ) ರಂಜಿತ್ ಎಸ್.ಭಂದಾರಿ (ಜೊತೆ ಕಾರ್ಯದರ್ಶಿ) ಶಶಿಧರ್ ಭಂಡಾರಿ (ಜೊತೆ ಕೋಶಾಧಿಕಾರಿ) ಸೇರಿದಂತೆ ಸುಮಾರು 30 ಕಾರ್ಯಕಾರಿ ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಗೌ| ಪ್ರ| ಕಾರ್ಯದರ್ಶಿ ನ್ಯಾ| ಆರ್.ಎಂ.ಭಂಡಾರಿ ತಿಳಿಸಿದ್ದಾರೆ.