ಮುಂಬಯಿ, ಫೆ.11: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ದಿ.ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಮೂಲ್ಕಿ ಶಾಖೆಯ ಪ್ರಬಂಧಕ, ಹೆಜ್ಮಾಡಿ ಬಿಲ್ಲವ ಸಂಘದ ಉಪಾಧ್ಯಕ್ಷ, ಕ್ರೀಯಶೀಲ ಯುವ ಸಮಾಜ ಸೇವಕ ಲಕ್ಷ್ಮೀನಾರಾಯಣ ಸಿ.ಸಾಲ್ಯಾನ್ (42.) ಇಂದಿಲ್ಲಿ ಮುಂಜಾನೆ ಮಂಗಳೂರು ಜ್ಯೋತಿ ಅಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅನಾರೋಗ್ಯದಿಂದ ವಿಧಿವಶರಾದರು.
ಮೃತರು ಪತ್ನಿ, ಎರಡು ಹೆಣ್ಣು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಹೆಜ್ಮಾಡಿ ಬಿಲ್ಲವ ಸಂಘದ ಅಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಮತ್ತು ಪದಾಧಿಕಾರಿ, ಸದಸ್ಯರನೇಕರು, ಭಾರತ್ ಬ್ಯಾಂಕ್ನ ಉಪ ಮಹಾ ಪ್ರಬಂಧಕ ಮೋಹನ್ದಾಸ್ ಹೆಜ್ಮಾಡಿ, ಕರ್ನಾಟಕ ಪ್ರಾದೇಶಿಕ ಉಪ ಮಹಾ ಪ್ರಬಂಧಕ ಬಾಲಕೃಷ್ಣ ಕರ್ಕೇರಾ, ಸಹಾಯಕ ಮಹಾ ಪ್ರಬಂಧಕ ಹರೀಶ್ ಕೆ.ಹೆಜ್ಮಾಡಿ, ಸಹೋದರರುಗಳಾದ ದಿನೇಶ್ ಸಾಲ್ಯಾನ್ , ಭೋಜಾ ಸಾಲ್ಯಾನ್ ಅಲ್ಲದೆ ದಿನ್ರಾಜ್ ಬಂಗೇರಾ, ಎಸ್.ಕೆ ಸಾಲ್ಯಾನ್ ಬೆಳ್ಮಾಣ್ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದು ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಲಕ್ಷ್ಮೀನಾರಾಯಣ ನಿಧನಕ್ಕೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಅಸೋಸಿಯೇಶನ್ನ ಸರ್ವ ಪದಾಧಿಕಾರಿಗಳು, ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಮತ್ತು ಸರ್ವ ನಿರ್ದೇಶಕರು, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಕಿರಣ್ ಬಿ.ಅಮೀನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ, ಮಿತ್ರ ಓಂದಾಸ್ ಕಣ್ಣಂಗಾರ್ ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ.