ಕುಂದಾಪುರ, ಫೆ.19: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, ವಾರ್ಷಿಕ ಮಹಾ ಸಭೆ ಮತ್ತು ಪದಾಧಿಕಾರಿಗಳ ಚುನಾವಣೆ ಇಗರ್ಜಿಯ ಸಭಾ ಭವನದಲ್ಲಿ ನೆಡೆಯಿತು.
ಜೇಕಬ್ ಡಿಸೋಜಾ ಈ ಸಾಲಿನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಗೊಂಡರು, ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ವಿಲ್ಸನ್ ಆಲ್ಮೇಡಾ ಸ್ವಾಗತಿಸಿ ತಮ್ಮ ಅನ್ನಿಸಿಕೆಯನ್ನು ಹಂಚಿಕೊಂಡರು. ಕಾರ್ಯದರ್ಶಿ ಶೈಲಾ ಆಲ್ಮೇಡಾ ವರದಿಯನ್ನು ವಾಚಿಸಿದರು. ಖಚಾಂಚಿ ವಾಲ್ಟರ್ ಡಿಸೋಜಾ ಲೆಕ್ಕ ಪತ್ರವನ್ನು ಮಂಡಿಸಿದರು. ಪ್ರಧಾನ ಧರ್ಮಗುರು ಅಧ್ಯಾತ್ಮಿಕ ನಿರ್ದೇಶಕರಾದ ವ|ಅನಿಲ್ ಡಿಸೋಜಾ ಆರಿಸಿ ಬಂದವರನ್ನು ಶುಭ ಹಾರೈಸಿ ‘ಒಳ್ಳೆಯ ಕೆಲಸಗಳನ್ನು ಮಾಡಿ ಧರ್ಮಕೇಂದ್ರಕ್ಕೆ ಒಳ್ಳೆಯ ಹೆಸರನ್ನುತರುವಲ್ಲಿ ಶ್ರಮಿಸಿ’ ಎಂದು ಸಂದೇಶ ನೀಡಿದರು.
ನಿಕಟ ಪೂರ್ವ ಅಧ್ಯಕ್ಷ ವಿಲ್ಸನ್ ಆಲ್ಮೇಡಾ, ನಿಯೋಜಿತ ಅಧ್ಯಕ್ಷರಾಗಿ ಶೈಲಾ ಆಲ್ಮೇಡಾ, ಉಪಾಧ್ಯಕ್ಷರಾಗಿ ವಿಲಿಯಮ್ ಡಿಸೋಜಾ, ಕಾರ್ಯದರ್ಶಿಯಾಗಿ ಜೂಲಿಯೆಟ್ ಪಾಯ್ಸ್, ಸಹಕಾರ್ಯದರ್ಶಿಯಾಗಿ ನಿರ್ಮಲ ಡಿಸೋಜಾ, ಖಚಾಂಚಿಯಾಗಿ ಪ್ರೇಮಾ ಡಿಕುನ್ಹಾ, ಸಹ ಖಚಾಂಚಿಯಾಗಿ ಲೋಯ್ ಕರ್ವಾಲ್ಲೊ, ಸಂದೇಶ ಪ್ರತಿನಿಧಿಯಾಗಿ ವಾಲ್ಟರ್ ಡಿಸೋಜಾ, ರಾಜಾಕೀಯ ಸಂಚಾಲಕರಾಗಿ ಬರ್ನಾಡ್ ಜೆ.ಕೋಸ್ತಾ, ಸರ್ಕಾರಿ ಸವಲತೆ ಸಂಚಾಲಕರಾಗಿ ವಿನೋದ್ ಕ್ರಾಸ್ಟೊ, ಲೆಕ್ಕ ಪರಿಸೋಧಕರಾಗಿ ಶಾಂತಿ ಬಾರೆಟ್ಟೊ ಹಾಗೂ ಸುನೀಲ್ ಡಿಸೋಜಾ, ರೊಬರ್ಟ್ ಡಿಸೋಜಾ, ಲೋನಾ ಲುವಿಸ್, ಮೈಕಲ್ ಗೊನ್ಸಾಲ್ವಿಸ್ ಮತ್ತು ಅಂಟನಿ ಡಿಆಲ್ಮೇಡಾ ಕ್ರಿಯಾ ಸಮಿತಿ ಸದಸ್ಯರಾಗಿ ಆರಿಸಿ ಬಂದರು.
ಕಥೊಲಿಕ್ ಸಭಾದ ಕಿರಣ್ ಕ್ರಾಸ್ಟೊ ಮತ್ತು ಹೆರಿಕ್ ಗೊನ್ಸಾಲ್ವಿಸ್, ಚುನಾವಣ ಅಧಿಕಾರಿಗಳಾಗಿ ಆಗಮಿಸಿದ್ದರು, ಸಹಾಯಕ ಧರ್ಮಗುರು ವ| ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಹಾಜರಿದ್ದರು. ನಿಕಟ ಪೂರ್ವ ಕಾರ್ಯದರ್ಶಿ ಶೈಲಾ ಆಲ್ಮೇಡಾ ವಂದಿಸಿದರು. ಜೂಲಿಯೆಟ್ ಪಾಯ್ಸ್ ಕಾರ್ಯಕ್ರವನ್ನು ನೆಡೆಸಿಕೊಟ್ಟರು.