ಉಡುಪಿ, ಫೆ. 23: ಶ್ರೀ ಕೃಷ್ಣ ಮಠ ಉಡುಪಿ ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಇಲ್ಲಿ ಕಳೆದ ಗುರುವಾರ ನಡೆಸಲ್ಪಟ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದ ಗುರುಗಳ ಆಜ್ಞೆಯಂತೆ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಕ್ಷೇತ್ರ ಉಡುಪಿ ರಾಜಾಂಗಣದಲ್ಲಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ರೆಂಜಾಳ ರಾಮದಾಸ ಉಪಾಧ್ಯಾಯ ಪ್ರವಚನ ನೀಡಿದರು.
ಶ್ರೀ ವಿಶ್ವೇಶ ತೀರ್ಥ ಪಾದರ ವಿಶ್ವ ದಾಖಲೆಯ ಪಂಚಮ ಪರ್ಯಾಯದ ಶುಭಾವಸರದಲ್ಲಿ ಶ್ರೀ ಕೃಷ್ಣ ವಿಷಯದಲ್ಲಿ ರಾಮದಾಸ ಉಪಾಧ್ಯಾಯರು ಎರಡು ದಿನಗಳಲ್ಲಿ ಪ್ರವಚನ ನೀಡಿದರು.