Thursday 18th, April 2024
canara news

ಅಬುಧಾಬಿ : ಮಂಗಳೂರು ಕ್ರಿಕೆಟ್ ಕ್ಲಬ್ ವತಿಯಿಂದ ಪತ್ರಿಕಾಗೋಷ್ಠಿ

Published On : 24 Feb 2017   |  Reported By : Shodhan Prasad


ಅಬು ಧಾಬಿ : ಮಂಗಳೂರು ಕ್ರಿಕೆಟ್ ಕ್ಲಬ್ ವತಿಯಿಂದ ನಡೆಸಲ್ಪಡುವ “ಮಂಗಳೂರು ಕಪ್ 2017”ಕಪ್ ಐದನೇ ಸೀಸನ್ ಕುರಿತಾದ ಪತ್ರಿಕಾ ಗೋಷ್ಠಿ ಇತ್ತೀಚಿಗೆ ಶೇಖ್ ಝಾಯಿದ್ಅಂತಾರಾಷ್ಟ್ರೀಯ ಕ್ರೀಡಾಂಗಣದ ಪ್ರೆಸ್ ಕಾನ್ಫರೆನ್ಸ್ ಕೊಠಡಿಯಲ್ಲಿ ನಡೆಯಿತು.



ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಲತೀಫ್ ಕೆ . ಹೆಚ್ ಕಕ್ಕಿಂಜೆ ಎಂಸಿಸಿ ಯ ಧ್ಯೇಯೋದ್ದೇಶ ಮತ್ತು ಪಂದ್ಯಾವಳಿಯ ನಿಯಮಾವಳಿಯನ್ನು ಕೂಲಂಕುಷವಾಗಿ ವಿವರಿಸಿದರು.

ಈ ಪಂದ್ಯಾವಳಿಯು ಫೆಬ್ರವರಿ 24 ಶುಕ್ರವಾರ ಶೇಖ್ ಝಾಯಿದ್ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು. ಪಂದ್ಯಾವಳಿಯ ವಿಜಯಿಗಳಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದ್ದು ಅವು ಇಂತಿವೆ :

ಪ್ರಥಮ ಸ್ಥಾನ – ಟ್ರೋಫಿ ಮತ್ತು 12222/ -AED ಮೊತ್ತ
ರನ್ನರ್ ಅಪ್ – ಟ್ರೋಫಿ ಮತ್ತು 6222/ -AED ಮೊತ್ತ

ಸರಣಿ ಪುರುಷೋತ್ತಮ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕೀಪರ್, ಉತ್ತಮ ಕ್ಷೇತ ರಕ್ಷಕ, ಮನಮೋಹಕ ಕ್ಯಾಚ್ ಹಾಗು ಫೈನಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪ್ರದಾನಮಾಡಲಾಗುವುದು.

ಅಬ್ದುಲ್ ರಶೀದ್ ತಂಡಗಳ ನಾಯಕರ ಸಮಕ್ಷಮದಲ್ಲಿ ಪಂದ್ಯಾವಳಿಯ ವೇಳಾಪಟ್ಟಿ ಯನ್ನು ಅಂತಿಮಗೊಳಿಸಿದರು.

ಪಂದ್ಯಾವಳಿ ವೇಳಾಪಟ್ಟಿ ಇಂತಿದೆ:

 

ಸಿತಾರಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಮ್, ನಿಝಾರ್ ಚಾರ್ಮಾಡಿ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here