ಮುಂಬಯಿ, ಮಾ.17: ಮಂಗಳೂರು ವಿಶ್ವವಿದ್ಯಾಲಯಯಲ್ಲಿ ಬ್ಯಾರಿ ಅಧ್ಯಯನ ಪೀಠ, ಮಂಗಳೂರು ನಗರದಲ್ಲಿ ಹಜ್ ಭವನ ನಿರ್ಮಾಣ, ಉಪ್ಪು ನೀರನ್ನು ಕುಡಿಯಲು ಯೋಗ್ಯವಾಗುವಂತೆ ಪರಿವರ್ತನೆ, ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲೀಷ್ ಪ್ರಾರಂಭ ಸೇರಿದಂತೆ ಹಲವಾರು ಅಭಿವೃದ್ದಿ ಯೋಜನೆಗಳನ್ನು ರಾಜ್ಯ ಸರ್ಕಾರ 2017-18ರ ಬಜೆಟ್ನಲ್ಲಿ ಕೈಕೊಂಡ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಹೆಚ್.ಸಿದ್ದರಾಮಯ್ಯ ಅವರನ್ನು ಉಳ್ಳಾಲ ಜಮಾಅತ್ ವತಿಯಿಂದ ಸಯ್ಯಿದ್ ಮದನಿ ದರ್ಗ ಅದ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಉಳ್ಳಾಲ್ರವರೊಂದಿಗೆ ನಿಯೋಗವು ಅಭಿನಂದಿಸಿತು.
ಸಚಿವ ಯು.ಟಿ ಖಾದರ್ ಅವರನ್ನೊಳಗೊಂದ ನಿಯೋಗವು ಇಂದಿಲ್ಲಿ ಬೆಂಗಳೂರುನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ನೀಡಿ ಅಭಿನಂದಿಸಿತು.