ಮುಂಬಯಿ, ಮಾ.19: ಮಂಗಳೂರು ಉಳ್ಳಾಲ ಅಲ್ಲಿನ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ನ 35ನೇ ವಾರ್ಷಿಕ ಮತ್ತು ಹಝ್ರತ್ ಸಯ್ಯಿದ್ ಮದನಿ ಬನಾತ್ (ಮಹಿಳಾ) ಕಾಲೇಜು ಕಟ್ಟಡ ಶಿಲಾನ್ಯಾಸ ಶೀಘ್ರವೇ ನೆರವೇರಲಿದ್ದು ಈ ಭವ್ಯ ಕಾರ್ಯಕ್ರಮಕ್ಕೆ ಕರ್ರ್ನಾಟಕ ರಾಜ್ಯಪಾಲ ವಜುಭಾಯಿ ವಾಲ ಅವರನ್ನು ಮದನಿ ಟ್ರಸ್ಟ್ನ ಪದಾಧಿಕಾರಿಗಳು ಆಮಂತ್ರಿಸಿತು.
ಟ್ರಸ್ಟ್ನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ರಾಜ್ಯಪಾಲರಿಗೆ ಆಮಂತ್ರಿಸಿದ್ದು ಈ ಸಂದರ್ಭದಲ್ಲಿ ಆಹಾರ ಸಚಿವ ಯು.ಟಿ ಖಾದರ್, ಟ್ರಸ್ಟ್ನ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಸದಸ್ಯರಾದ ಮುಸ್ತಫ ಮಂಚಿಲ, ಅಯ್ಯೂಬ್ ಮಂಚಿಲ, ಹಮೀದ್ ಕೋಡಿ, ಹನೀಫ್ ಕೋಡಿ ಮತ್ತಿತರರು ಉಪಸ್ಥಿತರಿದ್ದರು.