ಮಂಗಳೂರು: ರಾಜ್ಯ ಸರ್ಕಾರವನ್ನು ಮಾಫಿಯಾಗಳು ಹೇಗೆ ನಿಯಂತ್ರಣದಲ್ಲಿಟ್ಟಿವೆ ಎಂಬುದಕ್ಕೆ ಉಡುಪಿ ಜಿಲ್ಲಾಧಿಕಾರಿ, ಎಸಿ ಅವರ ಕೊಲೆ ಯತ್ನ ಸಾಕ್ಷಿಯಾಗಿದೆ. ಈ ಮಾಫಿಯಾದ ಹಿಂದೆ ರಾಜ್ಯ ಸರ್ಕಾರದ ಕೈವಾಡವಿರುವುದು ಸ್ಪಷ್ಟ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪ ವರ್ಷಗಳಿಂದಲೂ ರಾಜ್ಯದಲ್ಲಿ ಇಂತಹ ಗೂಂಡಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಮೂಡಬಿದಿರೆಯ ಪ್ರಶಾಂತ್ ಹತ್ಯೆ, ರುದ್ರೇಶ್ ಹತ್ಯೆ, ಉಳ್ಳಾಲದ ಕಾರ್ತಿಕ್ ರಾಜ್ ಹತ್ಯೆ ಹೀಗೆ ಒಂದರ ಹಿಂದೆ ಒಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಆದರೆ, ರಾಜ್ಯ ಸರ್ಕಾರ್ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸೂಕ್ತ ಮರಳು ನೀತಿ ರೂಪಿಸದೆ ಇರುವುದೇ ಇಂತಹ ಚಟುವಟಿಕೆಗಳಿಗೆ ಕಾರಣ ಎಂದು ಆರೋಪಿಸಿದರು.