ಮಂಗಳೂರು: ಮಂಗಳೂರು ಮೂಲದ ನಟಿ ಐಶ್ವರ್ಯಾ ರೈ ಅವರು ಶನಿವಾರ ಬೆಳಗ್ಗೆ ತಮ್ಮ ಮಗಳು ಹಾಗೂ ತಾಯಿ ಜೊತೆಗೆ ಮಂಗಳೂರಿಗೆ ಆಗಮಿಸಿದ್ದಾರೆ.
ಮುಂಬೈನಿಂದ ಜೆಟ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದ ಐಶ್ವರ್ಯಾ ರೈ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಕುಮಾರಧಾರಾ ಸಂಗಮ ಕ್ಷೇತ್ರದಲ್ಲಿ ತಂದೆಯ ಪಿಂಡ ಪ್ರದಾನ ಮಾಡಿದರು. ಮೂಲತಃ ಕರಾವಳಿ ಭಾಗದವರಾದ ಐಶ್ವರ್ಯ ಅವರ ತಂದೆ ಕೃಷ್ಣಪ್ರಸಾದ್ ರೈ(78) ಅಲ್ಪಕಾಲದ ಅಸೌಖ್ಯದಿಂದ ಮುಂಬಯಿಯ ಬಾಂದ್ರದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಮಾ.18ರಂದು ನಿಧನರಾಗಿದ್ದರು.