ಮಂಗಳೂರು: ಜಮ್ಮುವಿನ ಕುಪ್ವಾರದಲ್ಲಿ ಉಗ್ರರೊಂದಿಗಿನ ಸೆಣಸಾಟದಲ್ಲಿ ಎದೆ ಮತ್ತು ಕಾಲಿಗೆ ವೈರಿಗಳ ಗುಂಡುಗಳು ಹೊಕ್ಕಿ ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮುಡಿಪು ಕೋಡಕ್ಕಲ್ಲಿನ ವೀರ ಯೋಧ ಸಂತೋಷ್ಕುಮಾರ್ ಮನೆಗೆ ಸೋಮವಾರ ಒಡಿಯೂರು ಶ್ರೀಗಳು, ಸಂಸದ ನಳಿನ್ಕುಮಾರು ಕಟೀಲು ಸೇರಿದಂತೆ ಅನೇಕರು ಭೇಟಿ ನೀಡಿದರು.
ವೈರಿಗಳ ಗುಂಡು ಹೊಕ್ಕಿ ದೇಹ ಜರ್ಜರಿತವಾಗಿದ್ದರೂ ಎದೆಗಾರಿಕೆಯಿಂದ ಹೋರಾಡಿ ಉಗ್ರನೋವ್ರನನ್ನು ಹೊಡೆದುರುಳಿಸಿದ ವೀರ ಯೋಧ ಸಂತೋಷ್ಕುಮಾರ್ ರನ್ನು ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಶಾಲು, ಹಾರ ಹಾಕಿ ಸನ್ಮಾನಿಸಿದರು.