ಮಂಗಳೂರು: ಮಂಗಳೂರಿನ ಕದ್ರಿಯ ಜಿಂಕೆ ಪಾರ್ಕ್ ಎಂದೇ ಖ್ಯಾತಿಯಾಗಿರುವ ಹಳೆ ಮೃಗಾಲಯದಲ್ಲಿ ಇನ್ನು ಮುಂದೆ ಸಂಗೀತ ಕಾರಂಜಿ ಆರಂಭಗೊಳ್ಳಲಿದೆ. ಬಹುತೇಕ ಎಪ್ರಿಲ್ ಅಂತ್ಯಕ್ಕೆ ಸಂಗೀತ ಕಾರಂಜಿಯು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಸಂಗೀತ ಕಾರಂಜಿಯಲ್ಲಿ ನೀರಿನ ನರ್ತನದ ಜೊತೆಗೆ ಲೇಸರ್ ಪ್ರದರ್ಶನದ ಮೂಲಕ ಜಿಲ್ಲೆಯ ಇತಿಹಾಸವನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ.
ಈ ಕಾರಂಜಿಯ ಪ್ರಾಯೋಗಿಕ ಪ್ರದರ್ಶನವನ್ನು ಸೋಮವಾರ ನಡೆಸಲಾಯಿತು. ಈ ಸಂದರ್ಭ ಶಾಸಕ ಜೆ.ಆರ್ . ಲೋಬೋ, ಮೇಯರ್ ಕವಿತಾ ಸನಿಲ್, ಮುಡಾ ಆಯುಕ್ತ ಶ್ರೀಕಾಂತ್ ರಾವ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗಿಶ್ ಮತ್ತಿತ್ತರರು ಉಪಸ್ಥಿತರಿದ್ದರು.