ಮಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಪ್ರೊಬೆಷನರಿಯ ೨೦೧೪ನೇ ಸಾಲಿನ ಪರೀಕ್ಷೆಯಲ್ಲಿ ದ.ಕ.ಜಿಲ್ಲೆಯ ೭ ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕೆಪಿಎಸ್ಸಿಯ ೪೬೪ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು.
ಅದರಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಯತೀಶ್ ಉಳ್ಳಾಲ(ಸಹಾಯಕ ಆಯುಕ್ತ), ಸುಳ್ಯದ ಅಜಿತ್ ಎಂ.(ಸಹಾಯಕ ಆಯುಕ್ತ), ಸುಮನಾ ಬಿ.(ಡಿವೈಎಸ್ಪಿ), ರಶ್ಮಿ ಎಸ್.ಆರ್(ತಹಶಿಲ್ದಾರ್), ಮಿಶೆಲ್ ಕ್ವೀನಿ ಡಿಕೋಸ್ತಾ( ತಹಶೀಲ್ದಾರ್), ಗಾಯತ್ರಿ ಸಿ.ಹೆಚ್( ತಾಲೂಕು ಸಮಾಜ ಕಲ್ಯಾಣಾಧಿಕಾರಿ), ಮಹೇಶ್ ಕುಮಾರ್ ಹೊಳ್ಳ( ಸಹಾಯಕ ಜೈಲು ಅಧೀಕ್ಷಕ) ಆಯ್ಕೆಯಾಗಿದ್ದಾರೆ.