ಮುಂಬಯಿ (ಬೆಂಗಳೂರು), ಮೇ.05 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕರ್ನಾಟಕ ರಾಜ್ಯಪಾಲರ ಆಯ್ಕೆಯಾನುಸಾರ ಮೂರು ವರ್ಷಗಳ ಕಾಲಾವಧಿಗೆ ತ್ರಿಸದಸ್ಯರ ನೇಮಕ ನಡೆಸಿದ್ದು ಮಂಡಳಿಗೆ ನೂತನ ಅಧಿಕರೇತರ ಸದಸ್ಯರನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೆÇನೆಗಲ್ ನಿವಾಸಿ, ಮಾಜಿ ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಅವರನ್ನು ಆಯ್ಕೆಗೊಳಿಸಲಾಗಿದೆ.
ಸದರಿ ಸದಸ್ಯರುಗಳ ನಾಮ ನಿರ್ದೇಶನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ ಹೆಚ್. ಸಿ ರಾಜೇಂದ್ರ ಕುಮಾರ್ ಆದೇಶ ಹೊರಡಿಸಿ ನೇಮಕಾತಿಯನ್ನು ಹೊರಡಿಸಿದ್ದಾರೆ. ಈ ಪಯ್ಕಿ ಎಂ.ವೆಂಕಟರಾಮ ಮೈಸೂರು ಹಾಗೂ ಸುರೇಶ್ ಗುರಪ್ಪ ತಳವಾರ್ ಬೆಳಗಾವಿ ಅವರನ್ನೂ ನೇಮಿಸಿ ಕೊಳ್ಳಲಾಗಿದೆ.