ಆಸ್ಟ್ರೇಲಿಯಾ, ಮೇ.11: ಮೆಲ್ಬರ್ನ್ನಲ್ಲಿರುವ ವಿಕ್ಟೋರಿಯಾ ರಾಜ್ಯದ ಪಾರ್ಲಿಮೆಂಟ್ ಭವನಕ್ಕೆ ಯುನೈಟೆಡ್ ಕನ್ನಡ ಸಂಘ, ಆಸ್ಟ್ರೇಲಿಯಾವು ಮೇ.13 ಮತ್ತು 14 ರಂದು ಜರಗಲಿರುವ 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ 40 ಜನ ಕಲಾವಿದರ ಸಾಂಸ್ಕೃತಿಕ ನಿಯೋಗಕ್ಕೆ ಬೇಟಿಯನ್ನು ಏರ್ಪಡಿಸಿತ್ತು.
ಈ ಸಂದರ್ಭದಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ ಇಂ| ಮಂಜುನಾಥ್ ಸಾಗರ್ ಅವರನ್ನು ಮೌಂಟ್ ವೇವರ್ಲಿ ಕ್ಷೇತ್ರದ ಸಂಸತ್ ಸದಸ್ಯ ಮೈಕೆಲ್ ಗಿಡ್ಲಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಕನ್ನಡ ಸಂಘದ ಅಧ್ಯಕ್ಷ ಕೆ.ಮಂಜುನಾಥ್ ಮತ್ತು ಸ್ಥಳೀಯ ರಾಜಕೀಯ ಮುಖಂಡ ರಾಮ್ ಪಾಲ್ ಉಪಸ್ಥಿತರಿದ್ದರು