Thursday 18th, April 2024
canara news

ಗುರುಪುರದಲ್ಲಿ ಮೇ 21ರಂದು ನಾಗಬ್ರಹ್ಮರ ಪುನರ್‍ಪ್ರತಿಷ್ಠೆ-ನಾಗದರ್ಶನ

Published On : 19 May 2017   |  Reported By : Dhananjaya Gurpur


ಗುರುಪುರ : ಮೇ 21ರಂದು ಮೂಳೂರು ಗ್ರಾಮದ ಗುರುಪುರ ಜಂಗಮ ಮಠಕ್ಕೆ ಸಂಬಂಧಿಸಿದ ತೋಕಾಲದಲ್ಲಿ ಆರಾಧಿಸ್ಪಡುತ್ತಿರುವ ಶ್ರೀನಾಗಬ್ರಹ್ಮ ದೇವರ ಪುನರ್‍ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ ಹಾಗೂ ನಾಗದರ್ಶನ ಸೇವೆ ಜರುಗಲಿದೆ.

ಮೇ 20ರಂದು ಸಂಜೆ 6ಕ್ಕೆ ದೇವತಾ ಪ್ರಾರ್ಥನೆ, ವಾಸ್ತು ಹೋಮ, ನಾಗಬ್ರಹ್ಮ ಅಧಿವಾಸ ಜರುಗಲಿದೆ. ಮೇ 21ರಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ, ಪ್ರತಿಷ್ಠಾ ಹೋಮ, ಕಲಶ ಪ್ರತಿಷ್ಠೆ, ನಾಗಬ್ರಹ್ಮ ಪ್ರತಿಷ್ಠೆ ಹಾಗೂ ಮಧ್ಯಾಹ್ನ 12.30ರಿಂದ ಶ್ರೀ ಗೋಪಾಲಕೃಷ್ಣ ಸಾಮಗರಿಂದ ನಾಗದರ್ಶನ ಜರುಗಲಿದೆ.

ಕೊಳದಬದಿ ಜಿ ಕೆ ಕೃಷ್ಣ ಭಟ್ ನೇತೃತ್ವದಲ್ಲಿ ನಾಗದರ್ಶನ ಸೇವೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here