ಮಂಗಳೂರು: ದ.ಕ.ಜಿಲ್ಲೆಯ ಹರಿಹರ ಪಳ್ಳತ್ತಡ್ಕ ಸಮೀಪದ ಮಲ್ಲಾರಲ್ಲಿ ರವಿವಾರ ಬೈಕ್ ಮತ್ತು ಜೀಪು ಪರಸ್ಪರ ಢಿಕ್ಕಿಯಾಗಿ ಬೈಕ್ ಸವಾರ ನೆಲ್ಯಾಡಿ ನಿವಾಸಿ ಧರ್ಣಪ್ಪ (35) ಸ್ಥಳದಲ್ಲೇ ಮೃತಪಟ್ಟರು.
ಘಟನೆಯಲ್ಲಿ ಸಹಸವಾರ ಮರ್ದಾಳದ ಪುರುಷೋತ್ತಮ (18) ಗಾಯಗೊಂಡಿದ್ದಾರೆ. ಬೈಕಿನಲ್ಲಿ ಬಾಳುಗೋಡುವಿನ ಸಂಬಂಧಿಕರ ಮನೆಗೆ ತೆರಳಿ ವಾಪಸಾಗುತ್ತಿದ್ದರು. ಈ ವೇಳೆ ಮಲ್ಲಾರ ತಲುಪುವ ಹೊತ್ತಿಗೆ ಎದುರು ಭಾಗದಿಂದ ಬಂದ ಜೀಪಿಗೆ ಬೈಕ್ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.