ಮಂಗಳೂರು: ಮಂಗಳೂರಿನ ಬಳ್ಳಾಲ್ಬಾಗ್ ಸಮೀಪ ಕೊಡಿಯಾಲ್ಗುತ್ತು ರಸ್ತೆಯ ಅಂಗಡಿಯೊಂದರ ಬಳಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ಶನಿವಾರ ರಾತ್ರಿ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿ ಒಟ್ಟು 48,360 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
20,460 ರೂ. ನಗದು, 5 ಮೊಬೈಲ್ ಫೋನ್, ಒಂದು ಸ್ಯಾಮ್ಸಂಗ್ ಟ್ಯಾಬ್ ಮತ್ತು ಮಟ್ಕಾ ಚೀಟಿ ಹಾಗೂ 2 ಬ್ಯಾಂಕ್ ಚೆಕ್ ವಶ ಪಡಿಸಿಕೊಂಡ ಸೊತ್ತುಗಳು ವಶಕ್ಕೆ. ಬಳ್ಳಾಲ್ಬಾಗ್ನ ಗಂಗಾಧರ (50), ಎಕ್ಕೂರು ಬಜಾಲ್ ರಸ್ತೆಯ ಪ್ರವೀಣ್ (35), ಪಚ್ಚನಾಡಿ ದೇವಿನಗರದ ಭಾಸ್ಕರ ಶೆಟ್ಟಿ (61) ಬಂಧಿತ ಆರೋಪಿಗಳು.
ಎಸಿಪಿ ಉದಯ ನಾಯಕ್ ಮಾರ್ಗದರ್ಶನದಲ್ಲಿ ಬರ್ಕೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ನರೇಂದ್ರ ಅವರ ನೇತೃತ್ವದಲ್ಲಿ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಸಿಬಂದಿ ಗಣೇಶ್, ರಾಜೇಶ್ ಅತ್ತಾವರ, ಕಿಶೋರ್ ಪೂಜಾರಿ, ನಾಗರಾಜ, ಮಹೇಶ್ ಅವರು ಭಾಗವಹಿಸಿದ್ದರು.