ಮಂಗಳೂರು: ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂಡಬಿದಿರೆ ಪುತ್ತಿಗೆ ಗ್ರಾಮದ ಹಂಡೇಲು ಶಾಲೆ ಬಳಿಯ ನಿವಾಸಿ, ರಾಕೇಶ್ ಕೋಟ್ಯಾನ್ (27) ಶುಕ್ರವಾರ ರಾತ್ರಿ ಮೃತಪಟ್ಟರು.ಅವರು ಮಡಂತ್ಯಾರ್ನಲ್ಲಿ ಸಹಕಾರಿ ಸಂಘವೊಂದರ ಶಾಖಾ ವ್ಯವಸ್ಥಾಪಕರಾಗಿದ್ದರು.
ಎ. 18ರಂದು ಕಾವಳಕಟ್ಟೆಯಲ್ಲಿ ಸಂಭವಿಸಿದ್ದ ಜೀಪು ಹಾಗೂ ಬೈಕ್ ಢಿಕ್ಕಿ ಪ್ರಕರಣದಲ್ಲಿ ಬೈಕ್ನಲ್ಲಿದ್ದ ರಾಕೇಶ್ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು.ಕೆಲವು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದ ರಾಕೇಶ್ಗೆ ಶುಕ್ರವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿತು. ತತ್ಕ್ಷಣ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲೇ ಅವರು ಅಸುನೀಗಿದರು. ರಾಕೇಶ್ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದು, ಸ್ಥಳೀಯ ಭಜನಾ ಮಂಡಳಿ, ಬಿಲ್ಲವ ಸಂಘದಲ್ಲಿ ಸಕ್ರಿಯ ಸದಸ್ಯರಾಗಿದ್ದರು.