Friday 19th, April 2024
canara news

ಕುಂದಾಪುರ ಸ್ತ್ರೀ ಸಂಘಟನೆಯ ಅಧ್ಯಕ್ಷೆಯಾಗಿ ಶಾಂತಿ ಬಾರೆಟ್ಟೊ ಆಯ್ಕೆ

Published On : 27 May 2017   |  Reported By : Bernard J Costa


ಕುಂದಾಪುರ, ಮೇ. 27: ಇತ್ತಿಚೆಗೆ ನೆಡೆದ ಕುಂದಾಪುರ ಪವಿತ್ರ ರೊಜರಿ ಮಾತಾ ಧರ್ಮಕೇಂದ್ರದ ಕಥೊಲಿಕ್ ಸ್ತ್ರೀ ಸಂಘಟನೆಯ ಚುನಾವಣೆಯಲ್ಲಿ 2017-18 ರ ಅವಧಿಯ ಅಧ್ಯಕ್ಷೆಯಾಗಿ ಶಾಂತಿ ರಾಣಿ ಬಾರೆಟ್ಟೊ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

ಕಾರ್ಯದರ್ಶಿಯಾಗಿ ವೀಣಾ ಆಲ್ಮೇಡಾ, ಖಜಾಂಚಿಯಾಗಿ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷೆಯಾಗಿ ಲವೀನಾ ಆಲ್ಮೇಡಾ, ಸಹಕಾರ್ಯದರ್ಶಿಯಾಗಿ ವಿಕ್ಟೋರಿಯಾ ಡಿಸೋಜಾ, ಮೊತಿಯಾಂ ಪತ್ರಿಕೆಯ ಪ್ರತಿನಿಧಿಯಾಗಿ ಮರಿಯಾ ಬಾರೆಟ್ಟೊ ಹಾಗೂ ವಲಯದ ಪ್ರತಿನಿಧಿಗಳಾಗಿ ವಿನಯಾ ಡಿಕೋಸ್ತಾ ಮತ್ತು ಶಾಂತಿ ಕರ್ವಾಲ್ಲೊ ಆಯ್ಕೆಯಾಗಿದ್ದಾರೆ.

ಈ ಚುನಾವಣ ಪ್ರಕ್ರಿಯೆಯನ್ನು ಪವಿತ್ರ ರೊಜರಿ ಮಾತಾ ಧರ್ಮಕೇಂದ್ರದ ಪ್ರಧಾನ ಧರ್ಮಗುರು ಹಾಗೂ ಸಂಘಟನೆಯ ಅಧ್ಯಾತ್ಮಿಕ ನಿರ್ದೇಶಕರದ ಪೂಜ್ಯ ಧರ್ಮಗುರು ಅನಿಲ್ ಡಿಸೋಜಾ ನೆಡೆಸಿಕೊಟ್ಟು ಸಂಘಟನೆಯಲ್ಲಿ ಸಮಾಜಕ್ಕೆ ಒಳಿತಾದ ಯೋಜನೆಗಳನ್ನು ಹಮ್ಮಿಕೊಂಡು ಸಂಘಟನೆ ಯಶ್ಶಸಿನತ್ತ ಕೊಂಡಯ್ಯ ಬೇಕೆಂದು, ನೂತನ ಕಾರ್ಯಕಾರಿ ಸಮಿತಿಗೆ ಅವರು ಶುಭ ಹಾರೈಸಿದರು. ‘ನೂತನ ಅಧ್ಯಕ್ಷೆಯಿಂದ ಸಂಘ ಇನ್ನೂ ಸಂಘಟನೆ ಇನ್ನೂ ಹೆಚ್ಚು ಪ್ರವರ್ದನಮಾನಗೊಳ್ಳೆಲೆಂದು ಹಾರೈಸಿ ನಿಕಟಪೂರ್ವ ಅಧ್ಯಕ್ಷೆ ವಿನಯಾ ಡಿಕೋಸ್ತಾ ನೂತನ ಅಧ್ಯಕ್ಷೆ ಶಾಂತಿ ಬಾರೆಟ್ಟೊ ಇವರಿಗೆ ಅಧಿಕಾರವನ್ನು ಹಸ್ತಾಂತರಗೊಳಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here