ಕುಂದಾಪುರ, ಮೇ. 27: ಇತ್ತಿಚೆಗೆ ನೆಡೆದ ಕುಂದಾಪುರ ಪವಿತ್ರ ರೊಜರಿ ಮಾತಾ ಧರ್ಮಕೇಂದ್ರದ ಕಥೊಲಿಕ್ ಸ್ತ್ರೀ ಸಂಘಟನೆಯ ಚುನಾವಣೆಯಲ್ಲಿ 2017-18 ರ ಅವಧಿಯ ಅಧ್ಯಕ್ಷೆಯಾಗಿ ಶಾಂತಿ ರಾಣಿ ಬಾರೆಟ್ಟೊ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಯಾಗಿ ವೀಣಾ ಆಲ್ಮೇಡಾ, ಖಜಾಂಚಿಯಾಗಿ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷೆಯಾಗಿ ಲವೀನಾ ಆಲ್ಮೇಡಾ, ಸಹಕಾರ್ಯದರ್ಶಿಯಾಗಿ ವಿಕ್ಟೋರಿಯಾ ಡಿಸೋಜಾ, ಮೊತಿಯಾಂ ಪತ್ರಿಕೆಯ ಪ್ರತಿನಿಧಿಯಾಗಿ ಮರಿಯಾ ಬಾರೆಟ್ಟೊ ಹಾಗೂ ವಲಯದ ಪ್ರತಿನಿಧಿಗಳಾಗಿ ವಿನಯಾ ಡಿಕೋಸ್ತಾ ಮತ್ತು ಶಾಂತಿ ಕರ್ವಾಲ್ಲೊ ಆಯ್ಕೆಯಾಗಿದ್ದಾರೆ.
ಈ ಚುನಾವಣ ಪ್ರಕ್ರಿಯೆಯನ್ನು ಪವಿತ್ರ ರೊಜರಿ ಮಾತಾ ಧರ್ಮಕೇಂದ್ರದ ಪ್ರಧಾನ ಧರ್ಮಗುರು ಹಾಗೂ ಸಂಘಟನೆಯ ಅಧ್ಯಾತ್ಮಿಕ ನಿರ್ದೇಶಕರದ ಪೂಜ್ಯ ಧರ್ಮಗುರು ಅನಿಲ್ ಡಿಸೋಜಾ ನೆಡೆಸಿಕೊಟ್ಟು ಸಂಘಟನೆಯಲ್ಲಿ ಸಮಾಜಕ್ಕೆ ಒಳಿತಾದ ಯೋಜನೆಗಳನ್ನು ಹಮ್ಮಿಕೊಂಡು ಸಂಘಟನೆ ಯಶ್ಶಸಿನತ್ತ ಕೊಂಡಯ್ಯ ಬೇಕೆಂದು, ನೂತನ ಕಾರ್ಯಕಾರಿ ಸಮಿತಿಗೆ ಅವರು ಶುಭ ಹಾರೈಸಿದರು. ‘ನೂತನ ಅಧ್ಯಕ್ಷೆಯಿಂದ ಸಂಘ ಇನ್ನೂ ಸಂಘಟನೆ ಇನ್ನೂ ಹೆಚ್ಚು ಪ್ರವರ್ದನಮಾನಗೊಳ್ಳೆಲೆಂದು ಹಾರೈಸಿ ನಿಕಟಪೂರ್ವ ಅಧ್ಯಕ್ಷೆ ವಿನಯಾ ಡಿಕೋಸ್ತಾ ನೂತನ ಅಧ್ಯಕ್ಷೆ ಶಾಂತಿ ಬಾರೆಟ್ಟೊ ಇವರಿಗೆ ಅಧಿಕಾರವನ್ನು ಹಸ್ತಾಂತರಗೊಳಿಸಿದರು.