Wednesday 1st, May 2024
canara news

ಮಹಾರಾಷ್ಟ್ರ ರಾಜ್ಯದ 2016-17ರ ಶೈಕ್ಷಣಿಕ ಸಾಲಿನ ಎಸ್‍ಎಸ್‍ಸಿ ಫಲಿತಾಂಶ

Published On : 13 Jun 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.13: ಮಹಾರಾಷ್ಟ್ರ ರಾಜ್ಯದ 2016-17ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್‍ಎಸ್‍ಸಿ) ಬೋರ್ಡ್ ಫಲಿತಾಂಶವನ್ನು ಮಹಾರಾಷ್ಟ್ರ ಶಿಕ್ಷಣ ಮಂಡಳಿ ಇಂದಿಲ್ಲಿ ಮಂಗಳವಾರ ಮಧ್ಯಾಹ್ನ ಪ್ರಕಟಿಸಿದ್ದು ಉತ್ತೀರ್ಣರಲ್ಲಿ ಈ ಬಾರಿಯೂ ವಿದ್ಯಾಥಿರ್üನಿಯರೇ ಮೇಲುಗೈ ಸಾಧಿಸಿದ್ದಾರೆ. ಇಡೀ ಮಹಾರಾಷ್ಟ್ರದಲ್ಲಿ 88.74% ಉತ್ತೀರ್ಣ ಫಲಿತಾಂಶ, ಮುಂಬಯಿ ನಗರದಾದ್ಯಂತ 90.09% ಫಲಿತಾಂಶ ಫಲಿಸಿದೆ.

ರಾಯನ್ ಇಂಟರ್‍ನೇಶನಲ್ ಸಮೂಹ ಶೈಕ್ಷಣಿಕ ಸಂಸ್ಥೆಯ ಪ್ರೌಢಶಾಲೆಗಳಲ್ಲಿ ಒಂದಾದ ಬೊರಿವಿಲಿ ಪೂರ್ವದ ಸೈಂಟ್ ಕ್ಸೇವಿಯರ್ಸ್ ಹೈಸ್ಕೂಲುಗೆ 99.67% ಫಲಿತಾಂಶ ಲಭಿಸಿದೆ. ಪರೀಕ್ಷೆಯಲ್ಲಿ 96.00% ಅಂಕಗಳೊಂದಿಗೆ ಕು| ಅಕ್ಷತಾ ಆರ್. ಕೊಲ್ತಾಕರ್ ವಿದ್ಯಾಥಿರ್üನಿ ಶಾಲೆಯಲ್ಲೇ ಪ್ರಥಮರೆಣಿಸಿದ್ದಾಳೆ. ಕು| ಮೆಘ್ನಾ ರಾಜೇಶ್ ಅಂತಿಕಾಡ್ ಹಾಗೂ ಕೃತಿ ಜತಿನ್ ಶಾಹ 94.00% ದ್ವಿತೀಯ ಸ್ಥಾನಗಳನ್ನು ಪಡೆದಿರುವರು. ತುಳು-ಕನ್ನಡ ವಿದ್ಯಾಥಿರ್üನಿ ಕು| ಮಾನ್ವಿತಾ ಡಿ.ಅಂಚನ್ 93.40% ಅಂಕಗಳೊಂದಿಗೆ ಡಿಸ್ಟಿಂಕ್‍ಶನ್‍ನೊಂದಿಗೆ ಪಾಸಾಗಿದ್ದು, ಇವರು ಮಂಗಳೂರಿನ ಮಣ್ಣಗುಡ್ಡೆ ಮೂಲದ ದೇವದಾಸ್ ಅಂಚನ್ ಮತ್ತು ಮಂಗಳೂರು ಅತ್ತಾವರ ಮೂಲದ ಶ್ರೀಮತಿ ಯಮಿನಿ ಅಂಚನ್ ದಂಪತಿ ಸುಪುತ್ರಿ ಆಗಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ತುಳು-ಕನ್ನಡಿಗ ವಿದ್ಯಾಥಿರ್üಗಳು ಉತ್ತೀರ್ಣರಾಗಿದ್ದಾರೆ ಎಂದು ಬಂಟ್ವಾಳ ಮೂಲದ ಶಾಲೆಯ ಪ್ರಾಂಶುಪಾಲೆ ಮಾರಿಯೆಟ್ ಫೆರ್ನಾಂಡಿಸ್ ತಿಳಿಸಿದ್ದಾರೆ.

 


MS. ANTHIKAD MEGHANA RAJESH Percentage : 94.00%
MS. SHAH KRUTI JATIN Percentage : 94.00%
MS. ANCHAN MANWITHA DEVDAS Percentage : 93.60%

MS. KOLTHARKAR AKSHATA RAJDEEP Percentage : 96.00%




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here