Friday 19th, April 2024
canara news

ಪೋಲಿಸ್ ಅಧಿಕಾರಿ ಗೋಪಾಲ್ ಕೆ.ಬಜ್ಪೆ ಅವರಿಗೆ ಪೆÇೀಲಿಸ್ ಆಯುಕ್ತರಿಂದ ಸೇವಾ ಪ್ರಶಂಸನಾ ಪತ್ರ

Published On : 17 Jun 2017   |  Reported By : Rons Bantwal


ಮುಂಬಯಿ, ಜೂ. 18: ಕಳೆದ ಅನೇಕ ವರ್ಷಗಳಿಂದ ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವಿಭಾಗೀಯ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಮಂಗಳೂರು ಅಲ್ಲಿನ ಬಜ್ಪೆ ಮತ್ತು ಇದೀಗ ಕಾವೂರು ಪೋಲಿಸ್ ಠಾಣೆಯ ಆಧೀನದಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಸ್ತುಬದ್ಧ ಹಾಗೂ ನಿಷ್ಠಾವಂತ ಶಿಷ್ಟಾಚಾರಿ ಪೋಲಿಸ್ ಅಧಿಕಾರಿಯಾಗಿ ಶ್ರಮಿಸುತ್ತಿರುವ ಗೋಪಾಲ್ ಕೆ. ಬಜ್ಪೆ ಅವರಿಗೆ ಇತ್ತೀಚೆಗೆ ವರ್ಗಾವಣೆಗೊಂಡು ನಿರ್ಗಮಿಸಿದ ಮಂಗಳೂರು ಪೋಲಿಸ್ ಆಯುಕ್ತ ಎಂ.ಚಂದ್ರಶೇಖರ್ (ಐಪಿಎಸ್) ಸೇವಾ ಪ್ರಶಂಸನಾ ಪ್ರಮಾಣಪತ್ರ ನೀಡಿ ಅಭಿನಂದಿಸಿದರು.

ದಕ್ಷತೆಯಿಂದ ಉತ್ತಮವಾಗಿ ಕೆಲಸ ನಿರ್ವಹಿಸಿ ಮೇಲಾಧಿಕಾರಿ, ದೇಶ-ವಿದೇಶಿ ಗಣ್ಯರ, ರಾಷ್ಟ್ರ ರಾಜ್ಯ, ಜಿಲ್ಲೆಯ ರಾಜಕಾರಣಿ, ಉನ್ನತಾಧಿಕಾರಿಗಳ ಸೇವೆಗೆ ಹಗಳಿರುಲು ಎನ್ನದೆ ಎಲ್ಲರೊದಿಂಗೆ ಸ್ನೇಹತ್ವವನ್ನಿರಿಸಿ ಸಮನ್ವಯಕರಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಗೋಪಾಲ್ ಅವರ ದಕ್ಷತೆ, ಕಾರ್ಯವೈಖರಿ ಪರಿಗಣಿಸಿ ಆಯುಕ್ತ ಎಂ.ಚಂದ್ರಶೇಖರ್ ಪ್ರಶಂಸಿ ಇತ್ತೀಚೆಗೆ ಮಂಗಳೂರುನ ಪೋಲಿಸ್ ಕಮೀಷನರೇಟ್ ಕಛೇರಿಯಲ್ಲಿ ಗೋಪಾಲ್ ಅವರಿಗೆ ಪ್ರಶಂಸನಾ ಪ್ರಮಾಣಪತ್ರ ನೀಡಿ ಅಭಿನಂದಿಸಿ ನಿಮ್ಮ ಕರ್ತವ್ಯಪ್ರಜ್ಞೆ ಪೋಲಿಸ್ ಇಲಾಖೆ ಸೇರಿದಂತೆ ಸರ್ವರಿಗೂ ಮಾದರಿ ಆಗಲಿ ಎಂದೂ ಆಶಯ ವ್ಯಕ್ತ ಪಡಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here