ಮುಂಬಯಿ, ಜೂ.18: ತುಳು ಸಂಘ ಬರೋಡಾ ಇದರ ವತಿಯಿಂದ ಇದೇ ಬರುವ ಜೂ.25ನೇ ಶನಿವಾರ ಸಂಜೆ 6.00 ಗಂಟೆಗೆ ಗುಜರಾತ್ ರಾಜ್ಯದ ಬರೋಡಾ ಇಲ್ಲಿನ ಗುಜರಾತ್ ರಿಫೈನರಿ ಅಲ್ಲಿನ ಕಮ್ಯೂನಿಟಿ ಹಾಲ್ನÀಲ್ಲಿ `ದುಂಬೊರಿ ಪಂತೆಗೆ...' ತುಳು ನಾಟಕ ಪ್ರದರ್ಶನ ಆಗಲಿದೆ.
ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಶೆಟ್ಟಿ ಸಾರಥ್ಯದಲ್ಲಿ ಹಮ್ಮಿಕೊಂಡಿರುವ ನಾಟಕ ಕಾರ್ಯಕ್ರಮದಲ್ಲಿ ಲ| ಕಿಶೋರ್ ಡಿ.ಶೆಟ್ಟಿ ನಿರ್ದೇಶನದಲ್ಲಿ ತುಳಸಿದಾಸ್ ಮಂಜೆಶ್ವರ ರಚನೆಯ `ದುಂಬೊರಿ ಪಂತೆಗೆ...' ತುಳು ನಾಟಕವನ್ನು ನಾಗರ್ಜುನ ಮಂಗಲ್ಪಾಡಿ ಸಂಗೀತ ದೊಂದಿಗೆ ಲಕುಮಿ ತಂಡ ಮಂಗಳೂರು ಇದರ ಕುಸಲ್ದ ಕಲಾವಿದೆರ್ ಪ್ರದರ್ಶಿಸಲಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ (9825026104), ಅಧ್ಯಕ್ಷ ಶಶಿಧರ್ ಶೆಟ್ಟಿ (9824079546), ಕೋಶಾಧಿಕಾರಿ ವಾಸು ಪೂಜಾರಿ (9898472851) ಇವರನ್ನು ಸಂಪರ್ಕಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.
ಗುಜರಾತ್ನಾದಾದ್ಯಂತ ನೆಲೆಯಾಗಿರುವ ಸರ್ವ ತುಳು-ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ಪ್ರದರ್ಶನದ ಯಶಸ್ಸಿಗೆ ಶ್ರಮಿಸುವಂತೆ ಸಂಘದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ (9825169771) ಈ ಮೂಲಕ ವಿನಂತಿಸಿದ್ದಾರೆ.