Wednesday 24th, April 2024
canara news

ಭಾರತ್ ಬ್ಯಾಂಕ್ 41ನೇ ವಾರ್ಷಿಕ ಮಹಾಸಭೆ- ರೂಪಾಯಿ 117.48 ಕೋಟಿ ನಿವ್ವಳ ಲಾಭ

Published On : 18 Jun 2017   |  Reported By : Rons Bantwal


ಬಿಸಿಬಿ ಹಣಕಾಸು ವ್ಯವಸ್ಥೆಯ ಭರವಸೆಯಾಗಿದೆ : ಜಯ ಸಿ.ಸುವರ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.17 : ಗ್ರಾಹಕರ ಆಥಿರ್üಕ ವ್ಯವಹಾರಕ್ಕೆ ಸೂಕ್ಷ ್ಮ ಮಟ್ಟದ ಸುರಕ್ಷತಾ ಭಾವವನ್ನು ಮತ್ತು ನಂಬಿಕೆ ಹೊಂದಿರುವ ಭಾರತ್ ಬ್ಯಾಂಕ್ ಆರ್‍ಬಿಐ, ನವ ದೆಹಲಿಯ ಸೆಂಟ್ರಲ್ ರಿಜಿಸ್ಟ್ರ್ರಾರ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳ ಸಹಕಾರಿ ದಾಖಲಾಧಿಕಾರಿ ಮತ್ತು ಆಯುಕ್ತರ ಹಣಕಾಸು ವ್ಯವಸ್ಥೆಗಾಗಿನ ಮಾರ್ಗದರ್ಶನ ಮತ್ತು ಅರ್ಹತಾ ಮಾನದಂಡಗಳಿಗೆ ಬದ್ಧವಾಗಿ ಮುನ್ನಡೆಯುತ್ತಿದೆ. ಗ್ರಾಹಕರು ಆಥಿರ್üಕ ಚೈತನ್ಯತೆ ಪಡೆದು ಸೇವಾ ಧನ್ಯತೆ ಪಡೆದಿರುವುದೇ ನಮ್ಮ ಬ್ಯಾಂಕ್‍ನ ಸಾರ್ಥಕತೆ ಆಗಿದೆ. ಗ್ರಾಹಕರ ಹಣಕಾಸು ಭದ್ರತೆಗೆ ಸದಾ ಸುರಕ್ಷೆ, ನಂಬಿಕೆ ಹಾಗೂ ಭದ್ರತೆಯನ್ನೊದಗಿಸಿದ ಕಾರಣವೇ ಬ್ಯಾಂಕ್‍ನ ಸೇವಾ ಸಾಚಾತನವನ್ನು ಗ್ರಾಹಕರೇ ಖಾತ್ರಿ ಪಡಿಸಿದ್ದಾರೆ. ಆದುದರಿಂದ ಬಿಸಿಬಿ ಹಣಕಾಸು ವ್ಯವಸ್ಥೆಯ ಭರವಸೆ ಎಂದೆಣಿಸಿದೆ ಎಂದು ಭಾರತ್ ಕೋ.ಅಪರೇಟಿ ವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಗೋರೆಗಾಂವ್ ಪೂರ್ವದ ಸೋನಾವಣೆ ರಸ್ತೆಯಲ್ಲಿನ ಬ್ರಿಜ್‍ವಾಸಿ ಪ್ಯಾಲೇಸ್ ಸಭಾಗೃಹದ ಲ್ಲಿ ನಡೆಸಲ್ಪಟ್ಟ ಭಾರತ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯ 41ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಭಿಕ ಸದಸ್ಯರನ್ನುದ್ದೇಶಿಸಿ ಸುವರ್ಣರು ಮಾತನಾಡಿದರು. ಬಿಲ್ಲವರ ಅಸೋಸಿಯೇಶ ನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು.

ಮಾನವ ಜೀವನದಲ್ಲಿ ಹಣಕಾಸು ಜವಾಬ್ದಾರಿಗಳು ಹಾಗೂ ಹೊಣೆಗಾರಿಕೆ ಹೆಚ್ಚಾಗುವುದು ತುಂಬ ಸಹಜವಾದದ್ದು. ಅವರ ಹಣಕಾಸು ಸ್ಪಂದನೆ ಹಾಗೂ ವ್ಯವಹಾರ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೊಂದಿ, ಸಾಲದಾರರ ಮರುಪಾವತಿ ಸಾಮರ್ಥ್ಯ ಮನವರಿಸುತ್ತಾ ಮರುಪಾವತಿಗೆ ಉತ್ತೇಜನ ನೀಡಿದ್ದು ಬ್ಯಾಂಕ್ ಸಾಲಮೊತ್ತ ಹಿಂಪಡೆಯುವಲ್ಲಿ ಸಶಕ್ತಗೊಂಡಿದೆ. ಸಾಲದಾರರನ್ನು ಪೆÇ್ರತ್ಸಾಹಿದ ಕಾರಣ ನೂರಾರು ಉದ್ಯೋಗದಾತರನ್ನು ಸೃಷ್ಟಿಸಿದ ಹಿರಿಮೆ ಭಾರತ್ ಬ್ಯಾಂಕ್‍ಗಿದೆ. ಬ್ಯಾಂಕ್‍ನ ಕ್ಯಾಲೆಂಡರ್ ವಾರ್ಷಿಕ ಕಾರ್ಯವೈಖರಿಯನ್ನು ಪ್ರಸ್ತಾಪಿಸಿದ ಸುವರ್ಣರು ಬ್ಯಾಂಕ್ ವ್ಯವಹಾರದ ಮಾಹಿತಿ ಭಿತ್ತರಿಸುತ್ತಾ ಗತ ಸಾಲಿನಲ್ಲಿ ಒಟ್ಟು ರೂಪಾಯಿ 1,964 ಕೋಟಿ ವ್ಯವಹಾರ ನಡೆಸಿ ವಾರ್ಷಿಕ ಆಥಿರ್üಕ ಅತಿಪ್ರಮಾಣದಲ್ಲಿ 12.97% ಹೆಚ್ಚಾಗಿಸಿದೆ. ಠೇವಣಾತಿಯಲ್ಲಿ ರೂಪಾಯಿ 1,267 ಕೋಟಿ ವ್ಯವಹಾರದೊಂ ದಿಗೆ 13.90% ಅಧಿಕತೆ ಪಡಿದಿದ್ದು, ಮುಂಗಡ ವ್ಯವಹಾರದಲ್ಲೂ ರೂಪಾಯಿ 697 ಕೋಟಿ ವ್ಯವಹರಿಸಿ 11.56 ಶೇಕಡಾಕ್ಕೇರಿದೆ. ನಿವ್ವಳ ಲಾಭ ರೂಪಾಯಿ 119.08 ಕೋಟಿ ಹೊಂದಿದೆ. ಗತ ಸಾಲಿನಲ್ಲಿ ಬ್ಯಾಂಕ್ ಒಟ್ಟು 13 ನೂತನ ಶಾಖೆಗಳನ್ನು ತೆರೆದಿದ್ದು, ಒಂದು ವಿಸ್ತಾರಿತ ಕೌಂಟರ್, ಎಟಿಎಂಗಳನ್ನು ತೆರೆದು ಒಟ್ಟು 101 ಶಾಖೆಗಳನ್ನು ಹೊಂದಿದೆ ಎನ್ನುತ್ತಾ ಈ ಬಾರಿಯೂ ತನ್ನ ಷೆÉÉೀರುದಾರರಿಗೆ ಈ ಬಾರಿಯೂ ಬ್ಯಾಂಕ್ 15% ಡಿವಿಡೆಂಟ್ ನೀಡುತ್ತಿದೆ ಎಂದರು.

ಗ್ರಾಹಕರ ಆಶಯ ಹಾಗೂ ನಮ್ಮ ಮನವಿ ಮೇರೆಗೆ ಆರ್‍ಬಿಐ ಇದೀಗಲೇ ಇನ್ನೂ ಹೊಸ ಆರು ಶಾಖೆಗಳನ್ನು ತೆರೆಯುವಲ್ಲಿ ಅನುಮತಿ ನೀಡಿದ್ದು ಆ ಪ್ರಕಾರ ಮಹಾರಾಷ್ಟ್ರದ ಮಲ್ವಾಣಿ-ಮಲಾಡ್, ಚೆಂಬೂರು, ಖಾರ್ ಪೂರ್ವ (ಮುಂಬಯಿ), ಕರ್ನಾಟಕದ ಬನ್ನೇರುಘಟ್ಟ (ಬೆಂಗಳೂರು), ಗುಜರಾತ್‍ನ ಸೂರತ್‍ನಲ್ಲಿ (ದ್ವಿತೀಯ ಶಾಖೆ) ಆರಂಭಿಸಲಿದ್ದೇವೆ. ಆ ಪಯ್ಕಿ ಅಂಕ್ಲೇಶ್ವರ್‍ನ ಶಾಖೆ ಇದೀಗಲೇ ಸೇವಾರಂಭಿಸಿದ್ದೇವೆ. ಬ್ಯಾಂಕ್‍ನ ಸರ್ವೋನ್ನತಿಗೆ ಸದಾ ಬೆನ್ನೆಲುಬು ಆಗಿ ಸಹಯೋಗವನ್ನೀಡುವ ಸರ್ವ ಗ್ರಾಹಕರ, ನಮ್ಮ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಪದಾಧಿಕಾರಿಗಳು, ಸರ್ವ ಸದಸ್ಯರ, ಬ್ಯಾಂಕ್‍ನ ಉನ್ನತಾಧಿಕಾರಿ, ಎಲ್ಲಾ ಸಿಬ್ಬಂದಿಗಳ, ಅಭಿವಂದಿಸುತ್ತೇನೆ ಎಂದೂ ಜಯ ಸುವರ್ಣರು ಅಭಿಮಾನ ವ್ಯಕ್ತಪಡಿಸಿದರು.

ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಸ್ವಾಗತಿಸಿ, ಬ್ಯಾಂಕ್‍ನ ಕಾರ್ಯಸಾಧನೆಗಳನ್ನು ವಿವರಿಸಿದರು. ಗತ ವರ್ಷದಲ್ಲಿ ಬ್ಯಾಂಕ್‍ನ ಪಾಲುದಾರಿಕ ಬಂಡವಾಳ ರೂಪಾಯಿ 228.75 ಕೋಟಿ, ಕಾಯ್ದಿರಿಸಿದ ಸ್ಥಿರನಿಧಿ ರೂಪಾಯಿ 889.89 ಕೋಟಿ, ಸ್ಥಿರ ಠೇವಣಾತಿ ರೂಪಾಯಿ 8,071.91 ಕೋಟಿ, ಉಳಿತಾಯ ಠೇವಣಾತಿ ರೂಪಾಯಿ 1,504.75 ಕೋಟಿ, ಚಾಲ್ತಿ ಠೇವಣಾತಿ ರೂಪಾಯಿ 591.82 ಕೋಟಿ, ಆವರ್ತ ಠೇವಣಾತಿ ರೂಪಾಯಿ 153.06 ಕೋಟಿ, ಭಾರತ್ ದೈನಂದಿನ ಠೇವಣಾತಿ ರೂಪಾಯಿ 63.48 ಕೋಟಿ ಆಗಿಸಿ ಒಟ್ಟು ರೂಪಾಯಿ 10,385.02 ಕೋಟಿ ವ್ಯವಹಾರ ನಡೆಸಿದೆ. ಸಾಲ ಮತ್ತು ಮುಂಗಡ ರೂಪಾಯಿ 6,731.34 ಕೋಟಿ, ನಿಬಿಡ ಆದಾಯ ರೂಪಾಯಿ 1,240.37 ಕೋಟಿ, ನಿವ್ವಳ ಲಾಭ ರೂಪಾಯಿ 119.08 ಕೋಟಿ, ಕಾರ್ಯಮಾನ ಬಂಡವಾಳ ರೂಪಾಯಿ 11,988.98 ಕೋಟಿ ವ್ಯವಹಾರಿಸಲಾಗಿದೆ ಎಂದು ಬ್ಯಾಂಕ್‍ನ ವಾರ್ಷಿಕ ಲೆಕ್ಕಾಚಾರ ಬಗ್ಗೆ ಮಾಹಿತಿಯನ್ನಿತ್ತರು.

ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರಾದ ವಾಸುದೇವ ಆರ್.ಕೋಟ್ಯಾನ್, ಪುಷ್ಫಲತಾ ಎನ್.ಸಾಲ್ಯಾನ್, ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ.ಕೋಟ್ಯಾನ್, ಅನ್ಬಲಗನ್ ಸಿ.ಹರಿಜನ, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಬಿಲ್ಲವ ಜಾಗೃತಿ ಬಳಗದ ಉಪಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ನಿರ್ದೇಶಕ ಮಹೇಂದ್ರ ಸೂರು ಕರ್ಕೇರ, ಹರೀಶ್ ಜಿ.ಅಮೀನ್, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ಲೋಣಾವಳಾ ನಗರ ಪರಿಷತ್‍ನ ನಗರಾಧ್ಯಕ್ಷೆ ಸುರೇಖಾ ಜಾಧವ್, ಉಪಾಧ್ಯಕ್ಷ ನಿಟ್ಟೆ ಶ್ರೀಧರ್ ಎಸ್.ಪೂಜಾರಿ, ಆರ್.ಆರ್ ಪಾಂಡ್ಯನ್, ಲಕ್ಷ್ಮಣ್ ಎಸ್.ಪೂಜಾರಿ (ಎನ್‍ಸಿಪಿ), ಬ್ಯಾಂಕ್‍ನ ಸ್ಥಾಪಕ ಕಾರ್ಯಾಧ್ಯಕ್ಷ ವರದ ಉಲ್ಲಾಳ್, ಸಂದರ್ಶ್ ಚೌಟ, ಸಿಎ| ಜಗದೀಶ್ ಶೆಟ್ಟಿ, ನ್ಯಾ| ಶಶಿಧರ ಕಾಪು ವಿಶೇಷವಾಗಿ ಉಪಸ್ಥಿತರಿದ್ದರು.

ಬ್ಯಾಂಕ್‍ನ ನೂರಾರು ಷೆÉೀರುದಾರರು, ಗ್ರಾಹಕರುಗಳು, ಹಿತೈಷಿಗಳು ಬ್ಯಾಂಕ್‍ನ ಉನ್ನತಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ಬ್ಯಾಂಕ್ ಅಧಿಕಾರಿ ಯಶೋಧರ ಡಿ.ಪೂಜಾರಿ ಪ್ರಾರ್ಥನೆಯೊಂದಿಗೆ ಸಭೆ ಆದಿಗೊಂಡಿತು ಯನ್ನಾಡಿದರು. ಬ್ಯಾಂಕ್‍ನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್.ಕರ್ಕೇರಾ ಕೃತಜ್ಞತೆ ಸಲ್ಲಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here