ಮಂಗಳೂರು: ಜಿಲ್ಲೆಯಲ್ಲಿ ಹಿಂದು - ಮುಸ್ಲಿಂ ಗಲಾಟೆ ಎಬ್ಬಿಸುವುದೇ ರಮಾನಾಥ ರೈ ಎಂದು ಮಾಜಿ ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್ ವಾಗ್ದಾಳಿ ನಡೆಸಿದ್ದಾರೆ. ರಮಾನಾಥ ರೈ ವಿರುದ್ಧ ಕೆಂಡಕಾರಿರುವ ಹರಿಕೃಷ್ಣ, "ಜನಾರ್ದನ ಪೂಜಾರಿಯವರು ಕಾಂಗ್ರೆಸ್ ಪಕ್ಷದ ಹಿರಿಯ ವ್ಯಕ್ತಿ. ಇಂಥ ವ್ಯಕ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೀನಾಯವಾಗಿ ಬೈದಿದ್ದಾರೆ.
ಮದುವೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ತೆಗಳಿದ್ದಾರೆ. ರಮಾನಾಥ ರೈಯನ್ನು 1985ರಲ್ಲಿ ಟಿಕೆಟ್ ಕೊಟ್ಟು ಶಾಸಕರಾಗಿಸಿದ್ದು ಪೂಜಾರಿ. ಆಸ್ಕರ್ ಫೆರ್ನಾಂಡಿಸ್ ಆಗಲೀ ವೀರಪ್ಪ ಮೊಯ್ಲಿಯಾಗಲಿ ಅವರನ್ನು ಶಾಸಕರಾಗಿಸಿದ್ದಲ್ಲ. ಈಗ ಹಣ ಆಗಿರಬಹುದು. ಅಧಿಕಾರದ ಅಹಂಕಾರದಿಂದ ಮಾತನಾಡಿದ್ದಾರೆ. ಇಂಥ ಕೀಳು ಭಾಷೆ ಬಳಸಿದ ರಮಾನಾಥ ರೈಯನ್ನು ಪಕ್ಷದಿಂದ ಕಿತ್ತು ಹಾಕಬೇಕು ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.