ಉಡುಪಿ:ಜೂ.29: ಉದ್ಯಾವರ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರು, ಕಾರ್ಯಕಾರಿ ಸಮಿತಿ ಹಾಗೂ ಸಿಬ್ಬಂದಿವರ್ಗದವರೊಂದಿಗೆ ಈದ್ ಸ್ನೇಹ ಕೂಟವು ಉದ್ಯಾವರದ ಸಂಪಿಗೆ ನಗರದಲ್ಲಿರುವ ಖದೀಮೀ ಜಾಮಿಯ ಮಸೀದಿಯಲ್ಲಿ ನಡೆಯಿತು. ಅಕ್ಬರ್ ಅಲಿ ಸಲಹಾ ಸಮಿತಿ ಸದಸ್ಯರು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಈದ್ ಸಂದೇಶವನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಶೀಮತಿ ಸುಗಂಧಿ ಶೇಖರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಉದ್ಯಾವರ. ಶ್ರೀ ಪ್ರದೀಪ್ ಸುವರ್ಣ ಅಧ್ಯಕ್ಷರು ಗಣೇಶೋತ್ಸವ ಸಮಿತಿ ಆರೋರು ತೋಟ ಸಂಪಿಗೆನಗರ. ರಹ್ಮತುಲ್ಲಾ ಅಧ್ಯಕ್ಷರು ಖದೀಮೀ ಜಾಮಿಯ ಮಸೀದಿ ಸಂಪಿಗೆ ನಗರ ಭಾಘವಹಿಸಿದರು. ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.