ಮಂಗಳೂರು: ಕೇಸ್ ವಜಾ ಮಾಡುವುದಾಗಿ ಹೇಳಿ ಲಂಚ ಪಡೆದಿದ್ದ ಉಳ್ಳಾಲ ಪೊಲೀಸ್ ಪೇದೆ ಮಹೇಶ್ ಗಟ್ಟಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2009ರಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಹೇಶ್ ಉಮ್ಮರ್ ಫಾರುಕ್ ಎಂಬವರಿಂದ ಲಂಚ ಪಡೆದಿದ್ದರು.ಈ ಪ್ರಕರಣಲ್ಲಿ ಲೋಕಾಯುಕ್ತ ಕೋರ್ಟ್ ನಲ್ಲಿ ವಾದ ವಿವಾದಗಳು ನಡೆದು ಕೊನೆಗೂ 8 ವರ್ಷಗಳ ನಂತರ ಉಳ್ಳಾಲ ಪೊಲೀಸ್ ಪೇದೆ ಮಹೇಶ್ ಗಟ್ಟಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶ ಮುರಳೀಧರ ಪೈ ಈ ಶಿಕ್ಷೆ ಪ್ರಕಟಿಸಿದರು. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ ಕೆ.ಎಸ್.ಎನ್ ರಾಜೇಶ್ ವಾದಿಸಿದ್ದರು . ಉದಯ ನಾಯಕ್ ಅವರ ನೇತೃತ್ವದದಲ್ಲಿ ಆರೋಪಿಗಳನ್ನ ಬಂದಿಸಲಾಗಿತ್ತು. ಆದರೆ ಪ್ರಕರಣದ ಒಂದನೇ ಆರೋಪಿ ಎಸ್ ಐ ರಾಮೇ ಗೌಡರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.