ಕೊಣಾಜೆ ಸಮೀಪದ ಅಡ್ಕರೆಪಡ್ಪು ವರ್ಕರ್ ಗುಡ್ಡೆ ಅಲ್ ಸಫಾ ಮಂಝಿಲ್ ನಿವಾಸಿ, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉದ್ಯೋಗಿ ಅಬ್ದುಲ್ ಸಮದ್ (62.) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಗ್ಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೆ ಕೊಣಾಜೆಯ ಕಣಚೂರು ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪತ್ನಿ, ಮಂಗಳೂರು ಬಿಜೈಯ "ಸ್ನೇಹದೀಪ್" ಏಡ್ಸ್ ಪೀಡಿತ ಮಕ್ಕಳ ಪಾಲನಾ ಕೇಂದ್ರದ ಸ್ಥಾಪಕಿ ತಬಸ್ಸುಮ್ ಸೇರಿದಂತೆ 5 ಹೆಣ್ಣು ಹಾಗೂ ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ.