ಕುಂದಾಪುರದ ವಡೇರಹೋಬಳಿ ಪಿ.ವಿ.ಎಸ್.ಸರೋಜಿನಿ ಮಧುಸೂಧನ ಡಿ ಕುಶೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾದ ಶುದ್ಧನೀರಿನ ವ್ಯವಸ್ಥೆಯನ್ನು ಉದ್ಯಮಿ ಪ್ರಕಾಶ್ ಕಾಮತ್ ಉದ್ಘಾಟಿಸಿದರು.
ತನ್ನ ತಾಯಿ ದಿ.ಗೌರಮ್ಮ ಕಾಮತ್ ಅವರ ಸ್ಮರಣಾರ್ಥ ರೂ.30 ಸಾವಿರ ರೂ. ವೆಚ್ಚದಲ್ಲಿ ದಾನಿ ಪ್ರಕಾಶ್ ಕಾಮತ್ ಶುದ್ಧ ನೀರಿನ ಘಟಕವನ್ನು ಪ್ರೌಢಶಾಲೆಗೆ ಹಸ್ತಾಂತರಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ಈ ಕೊಡುಗೆ ನೀಡಿದ ಪ್ರಕಾಶ್ ಕಾಮತ್ರನ್ನು ಅಭಿನಂದಿಸಿದರು.
ಪುರಸಭಾ ಸದಸ್ಯ ವಿಠಲ ಕುಂದರ್ ಉಪಸ್ಥಿತರಿದ್ದರು. ಶಿಕ್ಷಕಿ ನಾಗರತ್ನ ಶೇಟ್ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಶೆಟ್ಟಿ ನಿರೂಪಿಸಿದರು. ಚೆನ್ನಯ್ಯ ವಂದಿಸಿದರು.