Thursday 25th, April 2024
canara news

ವಡೇರಹೋಬಳಿ ಪ್ರೌಢಶಾಲೆ ಶುದ್ಧ ನೀರಿನ ವ್ಯವಸ್ಥೆ ಉದ್ಘಾಟನೆ

Published On : 17 Jul 2017   |  Reported By : Bernard J Costa


ಕುಂದಾಪುರದ ವಡೇರಹೋಬಳಿ ಪಿ.ವಿ.ಎಸ್.ಸರೋಜಿನಿ ಮಧುಸೂಧನ ಡಿ ಕುಶೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾದ ಶುದ್ಧನೀರಿನ ವ್ಯವಸ್ಥೆಯನ್ನು ಉದ್ಯಮಿ ಪ್ರಕಾಶ್ ಕಾಮತ್ ಉದ್ಘಾಟಿಸಿದರು.

ತನ್ನ ತಾಯಿ ದಿ.ಗೌರಮ್ಮ ಕಾಮತ್ ಅವರ ಸ್ಮರಣಾರ್ಥ ರೂ.30 ಸಾವಿರ ರೂ. ವೆಚ್ಚದಲ್ಲಿ ದಾನಿ ಪ್ರಕಾಶ್ ಕಾಮತ್ ಶುದ್ಧ ನೀರಿನ ಘಟಕವನ್ನು ಪ್ರೌಢಶಾಲೆಗೆ ಹಸ್ತಾಂತರಿಸಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ಈ ಕೊಡುಗೆ ನೀಡಿದ ಪ್ರಕಾಶ್ ಕಾಮತ್‍ರನ್ನು ಅಭಿನಂದಿಸಿದರು.

ಪುರಸಭಾ ಸದಸ್ಯ ವಿಠಲ ಕುಂದರ್ ಉಪಸ್ಥಿತರಿದ್ದರು. ಶಿಕ್ಷಕಿ ನಾಗರತ್ನ ಶೇಟ್ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಶೆಟ್ಟಿ ನಿರೂಪಿಸಿದರು. ಚೆನ್ನಯ್ಯ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here