ಮುಂಬಯಿ, ಜುಲೈ. 19: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ಧರಾಮಯ್ಯ ಅವರು ಇತ್ತೀಚಿಗೆ ಮಾಧ್ಯಮ ಲೋಕದ ಹೆಸರಾಂತ ಟೈಮ್ಸ್ ನೆಟ್ವರ್ಕ್ ಸಮೂಹವು ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠಿತ ಅನಿವಾಸಿ ಭಾರತೀಯ ಪುರಸ್ಕಾರಕ್ಕೆ ರೊನಾಲ್ಡ್ ಕೊಲಾಸ್ಸೋ ಅವರು ಪಾತ್ರರಾದುದ್ದಕ್ಕಾಗಿ ಹೂಗುಚ್ಚ ಮತ್ತು ಪಾರಿತೋಷಕ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಐವನ್ ಡಿ'ಸೋಜ, ಮಾನ್ಯ ಆಹಾರ ಮತ್ತು ನಾಗರೀಕ ಸಚಿವರಾದ ಯು.ಟಿ.ಖಾದರ್ ಮತ್ತು ಭಾರಿ ನೀರಾವರಿ ಸಚಿವರಾದ ಎಂ.ಬಿ.ಪಾಟೀಲ್ ಉಪಸ್ಥಿತಿತರಿದ್ದರು.