ರಾಜ್ಯದಲ್ಲಿ ನಡೆದ ಅರೆಸ್ಸೆಸ್ ಹಾಗೂ ಹಿಂದೂ ಮುಖಂಡರ ಹತ್ಯೆ ಪ್ರಕರಣಗಳ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆಯವರು ಕೇಂದ್ರ ಗ್ರಹ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಬೇಕೆಂದು ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಗ್ರಹ ಇಲಾಖೆಗೆ ಕೊಲೆಯಾದವರ ಬಗ್ಗೆ ನೀಡಿದ ಪಟ್ಟಿಯಲ್ಲಿ ಬದುಕಿರುವವರನ್ನು ಕೊಲ್ಲಲಾಗಿದೆ.ಇದು ಸಂಸದೆಗೆ ಶೋಭೆ ತರುವಂತದ್ದಲ್ಲ.ಸಂಸದರು ತಪ್ಪು ಮಾಹಿತಿ ಕೊಟ್ಟು ದಾರಿ ತಪ್ಪಿಸುವುದು ಸರಿಯಲ್ಲ.ಸಂಸದರು ಕೇಂದ್ರ ಗ್ರಹ ಸಚಿವರಿಗೆ ಸಲ್ಲಿಸಿರುವ ಪತ್ರ ಅತ್ಯಂತ ಬೇಜವಾಬ್ದಾರಿಯುತ, ಅಧಾರರಹಿತ ಹಾಗೂ ಅವೈಜ್ಞಾನಿಕವಾಗಿದೆ. ಅದುದರಿಂದ ಅವರು ಕೂಡಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನಿಡಬೇಕೆಂದು ಅಗ್ರಹಿಸಿದ್ದಾರೆ.