Thursday 18th, April 2024
canara news

ಮೈಸೂರು ಅಸೋಸಿಯೇಶನ್ ಮುಂಬಯಿ ಭವನದಲ್ಲಿ ಸ್ವರ್ಣಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾ ಮಹೋತ್ಸವ

Published On : 26 Aug 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಆ.25: ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯ ವತಿಯಿಂದ ಅಸೋಸಿಯೇಶನ್‍ನ ಭವನದಲ್ಲಿನ ಪ್ರತಿಷ್ಠಾಪಿತ ಮಹಾಗಣಪತಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಅಂತೆಯೇ ಭವನದ ಗಣಪತಿ ಮಂದಿರದ ಸನ್ನಿಧಿಯಲ್ಲಿ ವಾರ್ಷಿಕವಾಗಿ ನಡೆಸುವ ಸ್ವರ್ಣ ಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾ ಮಹೋತ್ಸವ ಆಚರಿಸಲಾಯಿತು.

ನಾರಾಯಣ ನವಿಲೇಕರ್ ಮತ್ತು ಡಾ| ಸತಿತಾ ಎನ್.ನವಿಲೇಕರ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದು, ಪುರೋಹಿತ ಸುರೇಶ್ ಕೆ.ಎಸ್ ಭಟ್ ತೀರ್ಥಹಳ್ಳಿ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಶಶಿಕಾಂತ್ ಜೋಶಿ ಅವರ ಸಂಘಟನೆಯಲ್ಲಿ ನಡೆಸಲ್ಪಟ್ಟ ಪೂಜಾ ಮಹೋತ್ಸವದ ಪೂಜಾಧಿಗಳಲ್ಲಿ ಅಸೋಸಿಯೇಶನ್‍ನ ವೀಣಾ ಎಸ್.ಜೋಶಿ ಭವಾನಿ ಭರ್ಗವಿ, ಉದಯ್ ಪೂಜಾರಿ, ಜ್ಯೋತಿ ಉದಯ್, ಉಮೇಶ್ ದೇವಾಡಿಗ, ಸತೀಶ್ ಎನ್.ಬಂಗೇರ ಸೇರಿದಂತೆ ಭಕ್ತರು, ಸದಸ್ಯರನೇಕÀರು ಉಪಸ್ಥಿತರಿದ್ದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here