ಮಂಗಳೂರು: ಎರಡು ದಿನಗಳ ಹಿಂದೆ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಹೊರವಲಯದ ಮುಕ್ರಂಪಾಡಿಯಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಬೈಕ್ ಸವಾರನನ್ನು ದೋಚಿದ ಪ್ರಕರಣದ ಆರೋಪಿಯನ್ನು ಆದಿತ್ಯವಾರ ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಮುಕ್ರಂಪಾಡಿ ನಿವಾಸಿ ಸೂರಜ್ ಶೆಟ್ಟಿ ಬಂಧಿತ ಆರೋಪಿ.
ಆ. 24ರಂದು ರಾತ್ರಿ ಮುಕ್ರಂಪಾಡಿ ನಿವಾಸಿ ವಿಶ್ವನಾಥ ರೈ ಅವರು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ದರ್ಬೆ ಸಾಂತೋಮ್ ಗುರುಮಂದಿರದ ಬಳಿ ಆರೋಪಿ ಬೈಕ್ಗೆ ಕೈ ಹಿಡಿದು ಡ್ರಾಪ್ ಕೇಳಿದ್ದನು. ಅನಂತರ ಮುಕ್ರಂಪಾಡಿ ಬಳಿ ಬೈಕ್ನಿಂದ ಇಳಿದು ವಿಶ್ವನಾಥ ರೈ ಅವರಿಗೆ ಬೆದರಿಕೆಯೊಡ್ಡಿ ಅವರಲ್ಲಿದ್ದ 2,150 ರೂ. ನಗದು, ವಿವಿಧ ಬ್ಯಾಂಕ್ಗಳ ಎಟಿಎಂ ಕಾರ್ಡ್, ವಾಹನ ಚಾಲನಾ ಪತ್ರ ಹಾಗೂ ಆರ್ಸಿ ಸಹಿತ ಬೈಕ್ನೊಂದಿಗೆ ಪರಾರಿಯಾಗಿದ್ದ.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.