Friday 19th, April 2024
canara news

ದರೋಡೆ ಆರೋಪಿ ಸೆರೆ

Published On : 29 Aug 2017   |  Reported By : Canaranews Network


ಮಂಗಳೂರು: ಎರಡು ದಿನಗಳ ಹಿಂದೆ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಹೊರವಲಯದ ಮುಕ್ರಂಪಾಡಿಯಲ್ಲಿ ಡ್ರಾಪ್‌ ಕೇಳುವ ನೆಪದಲ್ಲಿ ಬೈಕ್‌ ಸವಾರನನ್ನು ದೋಚಿದ ಪ್ರಕರಣದ ಆರೋಪಿಯನ್ನು ಆದಿತ್ಯವಾರ ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಮುಕ್ರಂಪಾಡಿ ನಿವಾಸಿ ಸೂರಜ್‌ ಶೆಟ್ಟಿ ಬಂಧಿತ ಆರೋಪಿ.

ಆ. 24ರಂದು ರಾತ್ರಿ ಮುಕ್ರಂಪಾಡಿ ನಿವಾಸಿ ವಿಶ್ವನಾಥ ರೈ ಅವರು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ದರ್ಬೆ ಸಾಂತೋಮ್‌ ಗುರುಮಂದಿರದ ಬಳಿ ಆರೋಪಿ ಬೈಕ್‌ಗೆ ಕೈ ಹಿಡಿದು ಡ್ರಾಪ್‌ ಕೇಳಿದ್ದನು. ಅನಂತರ ಮುಕ್ರಂಪಾಡಿ ಬಳಿ ಬೈಕ್‌ನಿಂದ ಇಳಿದು ವಿಶ್ವನಾಥ ರೈ ಅವರಿಗೆ ಬೆದರಿಕೆಯೊಡ್ಡಿ ಅವರಲ್ಲಿದ್ದ 2,150 ರೂ. ನಗದು, ವಿವಿಧ ಬ್ಯಾಂಕ್‌ಗಳ ಎಟಿಎಂ ಕಾರ್ಡ್‌, ವಾಹನ ಚಾಲನಾ ಪತ್ರ ಹಾಗೂ ಆರ್‌ಸಿ ಸಹಿತ ಬೈಕ್‌ನೊಂದಿಗೆ ಪರಾರಿಯಾಗಿದ್ದ.ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here