ಮಂಗಳೂರು: ಮಂಗಳೂರು ಸಮೀಪದ ತೊಕ್ಕೋಟು ಕೊಣಾಜೆ ರಸ್ತೆಯ ಕುತ್ತಾರು ದೇವಸ್ಥಾನದ ಸಮೀಪ ಗುರುವಾರ ಸಂಜೆ ಬಸ್ಸು ಅಪಘಾತದಲ್ಲಿ ಕೇರಳ ಮೂಲದ ಕೇರಳದ ಪಯ್ಯನ್ನೂರಿನ ವಳಸ್ರಾಜ್ (42) ಮೃತಪಟ್ಟಿದ್ದಾರೆ.ತಣ್ಣೀರುಬಾವಿಯಲ್ಲಿ ಸೆಲೂನ್ ಅಂಗಡಿಯನ್ನು ನಡೆಸುತ್ತಿರುವ ಅವರು ಅಲ್ಲಿಂದ ದೇರಳಕಟ್ಟೆಯ ಬಗಂಬಿಲದಲ್ಲಿರುವ ಸಹೋದರಿಯ ಮನೆಗೆ ಬರುವ ಸಂದರ್ಭ ಈ ಘಟನೆ ಸಂಭವಿಸಿದೆ.
ಸೆಲೂನ್ನಿಂದ ವಾಪಸಾಗುವ ವೇಳೆ ಸಹೋದರಿ ಪದ್ಮಾವತಿ ಅವರ ಪುತ್ರಿಗೆ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು. ಆದರೆ, ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.