ಮುಂಬಯಿ, ಸೆ.04: ಕಾಂದಿವಲಿ ಕನ್ನಡ ಸಂಘ ಇದರ 23ನೇ ಮಹಾಸಭೆಯನ್ನು ಇದೇ 2017ರ ಸಪ್ಟೆಂಬರ್ 10ನೇ ಆದಿತ್ಯವಾರ ಸಾಯಂಕಾಲ 4.00 ಗಂಟೆಗೆ ಕಾಂದಿವಲಿ ಪಶ್ಚಿಮದ ಮಹಾವೀರ್ ನಗರದಲ್ಲಿರುವ ಪಂಚೋಲಿಯಾ ಹೈಸ್ಕೂಲ್ನ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಜಯಪಾಲ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಲಿದೆ.
ಆ ಪ್ರಯುಕ್ತ ಸದಸ್ಯರೆಲ್ಲರೂ ಅಂದಿನ ಮಹಾಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಸಭೆಯನ್ನು ಸುಸಾಂಗವಾಗಿ ಜರಗಿಸಿ ಕೊಡಬೇಕಾಗಿ ಸಂಘದÀ ಕಾರ್ಯದರ್ಶಿ ಯೋಗೇಶ್ ಕೆ. ಹೆಜ್ಮಾಡಿ ಈ ಮೂಲಕ ಪ್ರತಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.