ಕೇಂದ್ರ ಸರ್ಕಾರದಗ್ರಾಮೀಣಅಭಿವೃದ್ಧಿ ಇಲಾಖೆ ಮತ್ತುರುಡ್ಸೆಟ್ ಸಂಸ್ಥೆಗಳ ರಾಷ್ಟ್ರೀಯ ಅಕಾಡೆಮಿ ಮಧ್ಯೆ ಅಗೋಸ್ತು 2017 ರಿಂದ ಮೂರು ವರ್ಷಗಳವರೆಗೆ ಒಡಂಬಡಿಕಾಕರಾರು ಪತ್ರಕ್ಕೆಇದೇ 6 ರಂದು ಬುಧವಾರದೆಹಲಿಯಲ್ಲಿ ವಿಜ್ಞಾನ ಭವನದಲ್ಲಿ ನಡೆದ ರಾಸ್ಟ್ರೀಯ ಸಲಹಾ ಮಂಡಳಿಯ ಸಭೆಯಲ್ಲಿ ಸಹಿ ಹಾಕಲಾಯಿತು.
ರುಡ್ಸೆಟ್ ಸಂಸ್ಥೆಗಳ ರಾಷ್ಟ್ರೀಯ ಅಕಾಡೆಮಿ ವತಿಯಿಂದ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಅಭಿವೃದ್ಧಿ ಸಚಿವಾಲಯದಜಂಟಿ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಒಡಂಬಡಿಕಾ ಪತ್ರಕ್ಕೆ ಸಹಿ ಹಾಕಿದರು. ಅಮರ್ಜಿತ್ ಸಿನ್ಹಾ ಅಧ್ಯಕ್ಷತೆ ವಹಿಸಿದರು.ರಾಷ್ಟ್ರೀಯ ನಿರ್ದೇಶಕ ಕೆ.ಎನ್. ಜನಾರ್ದನ್, ಮಹಾ ಪ್ರಬಂಧಕಆರ್.ಆರ್.ಸಿಂಘ್, ನಬಾರ್ಡ್ ಹಾಗೂ ಪ್ರಾಯೋಜಕ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾ, ಕಿರುಉದ್ಯಮ ಪ್ರಾರಂಭಿಸುವವರಿಗೆ ಕೌಶಾಲಾಭಿವೃದ್ಧಿಗಾಗಿ ಸರ್ಕಾರತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಧನಸಹಾಯ ಪಡೆಯಲುತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಬೇಕು.ಆರ್ಸೆಟಿಗಳ ಸಹಭಾಗಿತ್ವದೊಂದಿಗೆ ಫಲಾನುಭವಿಗಳಿಗೆ ತರಬೇತಿ ನೀಡಬೇಕುಎಂದು ಸಲಹೆ ನೀಡಿದರು.ಆರ್ಸೆಟಿಗಳು ಇನ್ನೂ ಹೆಚ್ಚಿನದಕ್ಷತೆ ಮತ್ತು ಬದ್ಧತೆಯಿಂದಕಾರ್ಯನಿರ್ವಹಿಸಬೇಕು ಎಂದು ಹೆಗ್ಗಡೆಯವರು ತಿಳಿಸಿದರು.