ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗುರುವಾರ ದೆಹಲಿಯಲ್ಲಿ ಸಚಿವ ಅನಂತ್ಕುಮಾರ್ ಹೆಗ್ಡೆಯವರನ್ನು ಭೇಟಿಯಾಗಿ ಅಭಿನಂದಿಸಿದರು.
ಉದ್ಯಮಶೀಲತೆ ಮತ್ತು ಕೌಶಾಲಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿ ಅಧಿಕಾರವಹಿಸಿ ಕೊಂಡಿರುವುದಕ್ಕೆ ಅಭಿನಂದನೆಗಳೊಂದಿಗೆ ಹೆಗ್ಗಡೆಯವರು ಶುಭಹಾರೈಸಿದರು.
ಧರ್ಮಸ್ಥಳದ ಬಹುಮುಖಿ ಸಮಾಜ ಸೇವಾ ಕಾರ್ಯಗಳು ಹಾಗೂ ರುಡ್ಸೆಟ್ ಸಂಸ್ಥೆಗಳ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ ಬಗ್ಯೆ ಹೆಗ್ಗಡೆಯವರ ಸಾಧನೆಯನ್ನು ಸಚಿವರುಶ್ಲಾಘಿಸಿದರು.