ಮಂಗಳೂರು : ಮಂಗಳೂರಿನ ಖ್ಯಾತ ಬಿಲ್ಡರ್ ಅವರ ಪುತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಶಕ್ತಿನಗರದ ನಿವಾಸಿ ಬಿಲ್ಡರ್ ಕೆ.ಸಿ.ನಾಯಕ್ ಅವರ ಪುತ್ರಿ ರೇಶ್ಮಾ ನಾಯಕ್ (50) ಎಂಬುವರು ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ಪತಿಯಿಂದ ಡಿವೋರ್ಸ್ ಪಡೆದಿದ್ದ ರೇಶ್ಮಾ ನಾಯಾಕ್, ಪೋಷಕರೊಂದಿಗೆ ಶಕ್ತಿಗರದ ಮನೆಯಲ್ಲಿ ವಾಸಿಸುತಿದ್ದರು. ರೇಶ್ಮಾ ಅವರ ಆತ್ಮಹತ್ಯೆಗೆ ನೈಜ ಕಾರಣ ಎನೆಂದು ತಿಳಿದುಬಂದಿಲ್ಲ.ಘಟನಾ ಸ್ಥಳಕ್ಕೆ ಕಂಕನಾಡಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.