Thursday 25th, April 2024
canara news

ದಹಿಸರ್‍ನ ಅದಮಾರು ಪೂರ್ಣಪ್ರಜ್ಞ ಎಜ್ಯುಕೇಶನ್ ಸೆಂಟರ್‍ಗೆ ಪಲಿಮಾರುಶ್ರೀ ಭೇಟಿ

Published On : 16 Oct 2017   |  Reported By : Canaranews network


ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಭಕ್ತಾಭಿಮಾನಿಗಳ ಭವ್ಯ ಸ್ವಾಗತ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.16: ಉಪನಗರ ದಹಿಸರ್ ಪೂರ್ವದ ಅದಮಾರು ಮಠ ಶಿಕ್ಷಣ ಕೇಂದ್ರ ಸಂಚಾಲಿತ ಪೂರ್ಣಪ್ರಜ್ಞ ಎಜ್ಯುಕೇಶನ್ ಸೆಂಟರ್‍ಗೆ ಈ ಶಿಕ್ಷಣ ಕೇಂದ್ರದ ಮುಖ್ಯಸ್ಥರೂ, ಉಡುಪಿ ಪರ್ಯಾಯ ಪೀಠ ಅಲಂಕರಿಸಲಿರುವ ಪಲಿಮಾರು ಮಠಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಇದಿಲ್ಲಿ ಶನಿವಾರ ಸಂಜೆ ಪಾದಾರ್ಪಣೆಗೈದರು. ಶ್ರೀಪಾದರನ್ನು ಶಾಲಾ ಮಂಡಳಿ, ವಿದ್ಯಾಥಿರ್üಗಳು ಹಾಗೂ ಸ್ಥಾನೀಯ ನಾಗರೀಕರು ತುಳುಕನ್ನಡಿಗ ಭಕ್ತಾಭಿಮಾನಿಗಳು ಭವ್ಯ ಮೆರವಣಿಗೆಯಲ್ಲಿ ಹೈಸ್ಕೂಲು ಸಭಾಂಗಣಕ್ಕೆ ಭಕ್ತಿಪೂರ್ವಕ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಪರ್ಯಾಯ ಸಮಿತಿ ಮುಂಬಯಿ ಗೌರವಾಧ್ಯಕ್ಷರಾದ ಡಾ| ಸುರೇಶ್ ಎಸ್.ರಾವ್ ಕಟೀಲು, ಎಜ್ಯುಕೇಶನ್ ಸೆಂಟರ್‍ನ ಕಾರ್ಯಾಧ್ಯಕ್ಷ ಎನ್.ಹೆಚ್ ಕುಸ್ನೂರು ಮತ್ತು ಕಾರ್ಯದರ್ಶಿ ಬಿ.ಜೆ ಶೆಣೈ, ಶ್ರೀ ಅದಮಾರು ಮಠ ಮುಂಬಯಿ ಶಾಖಾ ದಿವಾನ, ವಿದ್ಯಾ ಕೇಂದ್ರದ ಜೊತೆ ಕಾರ್ಯದರ್ಶಿ ಲಕ್ಷಿ ್ಮೀನಾರಾಯಣ ಮಚ್ಚಿಂತಾಯ ಸೇರಿದಂತೆ ಆಸುಪಾಸಿನ ನೂರಾರು ಶಿಕ್ಷಣ ಪ್ರಿಯರು ಮತ್ತು ಭಕ್ತಾಭಿಮಾನಿಗಳು, ವಿದ್ಯಾಥಿರ್üಗಳ ಪಾಲಕರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here