ಮುಂಬಯಿ, ಅ.26: ಸರಸ್ವತಿ ನಾರಾಯಣ ರಾವ್ ಪತ್ತುಮುಡಿ (86.) ಅವರು ಕಳೆದ ಬುಧವಾರ (ಅ.25) ಅಲ್ಪಕಾಲದ ಅನಾರೋಗ್ಯದಿಂದ ಮಹಾರಾಷ್ಟ್ರದ ಪುಣೆ ಇಲ್ಲಿನ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯ ಕುಂದಾಪುರ ಹಲಸಿನಾಡು ಮೂಲತಃ ಸರಸ್ವತಿ ಇವರು ಬಂಟ್ವಾಳ ತಾಲೂಕು ಪಾಣೆಮಂಗಳೂರು ಅಲ್ಲಿನ ಪತ್ತುಪುಡಿ ಮನೆತನಕ್ಕೆ ಸೇರಿದವರರು. ಪತಿ ನಾರಾಯಣ ರಾವ್ ಅವರು ಪುಣೆ ಅಲ್ಲಿನ ಡಿಫೆನ್ಸ್ನ ಅಕೌಂಟ್ಸ್ನ ಅಧಿಕಾರಿಯಾಗಿದ್ದರು.
ಕೂಟ ಮಹಾಜಗತ್ತು ಸಾಲಿಗ್ರಾಮ ಮುಂಬಯಿ ಅಂಗ ಸಂಸ್ಥೆಯ ಮುಖವಾಣಿ, ಕೂಟ ಬ್ರಾಹ್ಮಣರ `ಗುರು ನರಸಿಂಹವಾಣಿ' ತ್ರೈಮಾಸಿಕದ ಸಂಪಾದಕ, ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್ನ (ಬಿಎಸ್ಕೆಬಿಎ) ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ, ಹಾಲಿ ಜೊತೆ ಕಾರ್ಯದರ್ಶಿ, ಆಶ್ರಯ ಸಮಿತಿ ಸಂಚಾಲಕ ಪಿ.ಸಿ.ಎನ್ ರಾವ್ ಸೇರಿದಂತೆ ನಾಲ್ಕು ಗಂಡು, ಒಂದು ಹೆಣ್ಣು, ಬಂಧು ಬಳಗವÀನ್ನು ಅಗಲಿದ್ದಾರೆ.