Thursday 25th, April 2024
canara news

ಅ.29: ಶ್ರೀ ರಜಕ ಸಂಘ ಮುಂಬಯಿ ಇದರ ಡೊಂಬಿವಿಲಿ ಪ್ರಾದೇಶಿಕ ಸಮಿತಿಯಿಂದ ಡೊಂಬಿವ್ಲಿದ ರಜಕೋತ್ಸವ ಆಚರಣೆ

Published On : 28 Oct 2017   |  Reported By : Rons Bantwal


ಮುಂಬಯಿ, ಅ.27: ಶ್ರೀ ರಜಕ ಸಂಘ ಮುಂಬಯಿ ಇದರ ಡೊಂಬಿವಿಲಿ ಪ್ರಾದೇಶಿಕ ಸಮಿತಿಯಿಂದ ಡೊಂಬಿವ್ಲಿದ ರಜಕೋತ್ಸವವನ್ನು ಇದೇ ಅಕ್ಟೋಬರ್,29ನೇ ಆದಿತ್ಯವಾರ ಸಂಜೆ 5.00 ಗಂಟೆಗೆ ಸಂಭ್ರಮಿಸಲಿ ದೆ. ಆ ಪ್ರಯುಕ್ತ ಶ್ರೀ ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಮಾರ್ಗದರ್ಶನದಲ್ಲಿ ಅಂದು ಸಂಜೆ 5.00 ಗಂಟೆಗೆ ಧ್ಯಾನೇಶ್ವರ್ ಕಾರ್ಯಾಲಯ, ಮಹಾತ್ಮ ಫುಲೆ ರಸ್ತೆ, ವಿಷ್ಣುನಗರ್, ಡೊಂಬಿವಿಲಿ ಪಶ್ಚಿಮ ಇಲ್ಲಿ ಭಿವಂಡಿ ನಗರ ಪಾಲಿಕೆಯ ನಗರ ಸೇವಕ ಸಂತೋಷ್ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಭ್ರಮಿಸಲಿದೆ ಎಂದು ರಜಕ ಸಂಘದ ಡೊಂಬಿವಿಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಎಂ.ಸಾಲಿಯಾನ್ ತಿಳಿಸಿದ್ದಾರೆ.

    

Santhosh M Shetty                          Surendra V.Shetty                         Satish S. Salian.

ಕಲ್ಯಾಣ್ ಇಲ್ಲಿನ ಜಸ್ಮೀನ್ ಗ್ರೂಪ್ ಆಫ್ ಕಂಪೇನಿಸ್ ಇದರ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ವಿ.ಶೆಟ್ಟಿ ಮುಖ್ಯ ಅತಿಥಿüಯಾಗಿ ಆಗಮಿಸಲಿದ್ದು ಕಲ್ಯಾಣ್ ಡೊಂಬಿವಿಲಿ ನಗರ ಪಾಲಿಕೆಯ ನಗರ ಸೇವಕ ದಯಾಶಂಕರ್ ಶೆಟ್ಟಿ, ಡೊಂಬಿವಿಲಿ ಬಂಟ್ಸ್ ಅಧ್ಯಕ್ಷ ರಾಜೀವ ಭಂಡಾರಿ, ಕಾರ್ಯದರ್ಶಿ ಆನಂದ ಶೆಟ್ಟಿ, ಯಕ್ಷಕಲಾ ಸಂಸ್ಥೆಯ ಗೌರವ ಅಧ್ಯಕ್ಷ ದಿವಾಕರ ರೈ ಮತ್ತು ಸಮಾಜ ಸೇವಕ ಕರುಣಾಕರ ಶೆಟ್ಟಿ ಕಲ್ಲಡ್ಕ ಆಗಮಿಸಲಿದ್ದು ಸಂಜೆ 5.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, 7.00 ಗಂಟೆಯಿಂದ ದಿ| ನಾರಾಯಣ ಸಿ.ಕುಂದರ್ ಸ್ಮಾರಣಾರ್ಥ ತಾಳಮದ್ದಲೆ, 8.00 ಗಂಟೆಗೆ ಸಭಾ ಕಾರ್ಯಕ್ರಮ, ಸನ್ಮಾನ ಇತ್ಯಾದಿಗಳು ನಡೆಸಲಾಗುವುದು.

ರಜಕ ಸಂಘದ ಸಾಂಸ್ಕೃತಿಕ ಕಾರ್ಯಾಧ್ಯಕ್ಷ ಸಂಜೀವ ಎಕ್ಕಾರ್, ಉಪ ಕಾರ್ಯಾಧ್ಯಕ್ಷ ಬಾಲಕೃಷ್ಣ ಕುಂದರ್, ಡೊಂಬಿವಿಲಿ ಪ್ರಾದೇಶಿಕ ಸಮಿತಿ ಮಹಿಳಾಧ್ಯಕ್ಷೆ ವನಿತಾ ಎಸ್.ಸಾಲ್ಯಾನ್, ಯುವ ವಿಭಾಗಧ್ಯಕ್ಷೆ ಕು| ಶ್ವೇತಾ ಬಿ.ಸಾಲ್ಯಾನ್ ಸಾರಥ್ಯದಲ್ಲಿ ಜರುಗುವ ರಜಕೋತ್ಸವದಲ್ಲಿ ಮಹಾನಗರ ಮತ್ತು ಉಪನಗರದಲ್ಲಿನ ಸರ್ವ ರಜಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ರಜಕ ಸಂಘದ ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ಈ ಮೂಲಕ ವಿನಂತಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here