ಮಂಗಳೂರು:' ನಾನು ಡಾ.ಡಿ.ವಿರೇಂದ್ರ ಹೆಗ್ಗಡೆ ಅವರಿಗೆ ಸನ್ಮಾನ ಮಾಡುವ ಯೋಗ್ಯತೆ ಹೊಂದಿದ್ದೇನೋ ತಿಳಿದಿಲ್ಲ. ಅವರ ಮಹಾ ಸಾಧನೆಗಳ ಎದುರು ನಾನು ತುಂಬಾ ಸಣ್ಣವನು'ಇದು ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಹೆಗ್ಗಡೆ ಬಗ್ಗೆ ಭಾನುವಾರ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ ಮಾತು.
ಜನಸೇವೆಯೇ ಜನಾರ್ಧನ ಸೇವೆಯೆಂಬ ಮಂತ್ರವನ್ನು ಜೀವನದ ಏಕಮೇವ ಗುರಿಯಾಗಿರಿಸಿಕೊಂಡಿರುವ ಹೆಗ್ಗಡೆಯವರಿಂದ ಇನ್ನೂ 50 ವರ್ಷಗಳ ಸೇವೆ ಅಗತ್ಯವಿದೆ ಎಂದು ಪ್ರಧಾನಿ ಹೇಳಿದ್ದಾರೆ.