ಮಂಗಳೂರು: ಗಂಟಲಲ್ಲಿ ಚಕ್ಕುಲಿಯ ತುಂಡು ಸಿಲುಕಿ ಮಗು ಮೃತಪಟ್ಟ ಘಟನೆ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಗೇರುಕಟ್ಟೆ ನಿವಾಸಿ ವಿಠಲ್ ಎಂಬುವರ ಮಗು ಆರುಷ್ ಗೆ ಸೋಮವಾರ ಸಂಜೆ ಚಕ್ಕುಲಿಯ ತುಂಡನ್ನು ತಿನ್ನಲು ಕೊಡಲಾಗಿತ್ತು. ಏನು ಅರಿಯದ ಒಂದು ವರ್ಷದ ಮಗು ಆರುಷ್ ಚಕ್ಕುಲಿ ತುಂಡನ್ನು ಬಾಯಿಯಲ್ಲಿ ಹಾಕಿಕೊಂಡಿದ್ದ.ಈ ಸಂದರ್ಭದಲ್ಲಿ ಚಕ್ಕುಲಿಯ ತುಂಡು ಆರುಷ್ ಗಂಟಲಲ್ಲಿ ಸಿಲುಕಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮಗು ಆರುಷ್ ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.ಮಗು ಅಸ್ವಸ್ಥಗೊಂಡಿರುವುದನ್ನು ನೋಡಿ ವಿಠಲ್ ದಂಪತಿ ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆರುಷ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.