ಮುಡಿಪು : ಮೂರು ದಿನಗಳ ವಾರ್ಷಿಕ ಮಹೋತ್ಸವದ ಎರಡನೇ ದಿನವು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಅ. ವಂ. ಅಲೋಶಿಯಸ್ ಪಾವ್ಲ್ ಡಿಸೋಜ, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಕೃತಜ್ಞತಾ ಪೂಜೆಯನ್ನು ನೆರವೇರಿಸಿದರು.
ತಮ್ಮ ಪ್ರಬೋಧನೆಯಲ್ಲಿ ಮಹೋತ್ಸವದ ಸಂದೇಶವಾದ ಸಂತ ಜೋಸೆಫರ ಹಾಗೆ ಸುವಾರ್ತೆಗೆ ಸಾಕ್ಷಿಗಳಾಗುವ ಎನ್ನುವ ವಿಚಾರದಲ್ಲಿ ಬೋಧಿಸಿದರು.
ವಂ.ಬೆಂಜಮಿನ್ ಪಿಂಟೋ, ಪುಣ್ಯಕ್ಷೇತ್ರದ ನಿರ್ದೇಶಕರು , ವಂ. ಜೆ. ಬಿ. ಸಲ್ಡಾನ್ಹ, ವಂ. ಡೆನಿಸ್ ಸುವಾರಿಸ್,ವಂ. ಲಾರೆನ್ಸ್ ಮಸ್ಕರೇನಸ್, ವಂ. ಸಂತೋಷ್ ಡಿಸೋಜ, ವಂ. ಅಂದ್ರು ಡಿಸೋಜ, ವಂ. ಡೆನ್ಜಿಲ್ ಲೋಬೊ ಹಾಗೂ ಸುಮಾರು 20 ಧರ್ಮಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು